ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ವಯನಾಡ್ ಸ್ವಾಗತ ಸಮಾರಂಭದಲ್ಲಿ ಮುಸ್ಲಿಂ ಲೀಗ್ ಧ್ವಜ ಬಳಸದಂತೆ ಕಾಂಗ್ರೆಸ್ ಒತ್ತಾಯಿಸಿರುವುದು ಹಲವು ಟೀಕೆಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿದೆ!
ಯುಡಿಎಫ್ನಲ್ಲಿ ಕೆಲಸ ಮಾಡಲು ಮತ್ತು ಜನರನ್ನು ಒಟ್ಟುಗೂಡಿಸಲು ನಮಗೆ ಮುಸ್ಲಿಂ ಲೀಗ್ ಬೇಕು. ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಸ್ಲಿಂ ಲೀಗ್ ಬೇಕು. ಹಣ ಸಂಗ್ರಹಕ್ಕೂ ಮುಸ್ಲಿಂ ಲೀಗ್ ಬೇಕು. ರಾಹುಲ್ ಗೆಲ್ಲಲು ಮುಸ್ಲಿಂ ಲೀಗ್ ಹೋರಾಟಗಳ ಮುಂಚೂಣಿಯಲ್ಲಿ ಮುಸ್ಲಿಂ ಲೀಗ್ ಬೇಕು… ಆದರೆ ಧ್ವಜ ಮಾತ್ರ ಬೇಡ! ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸ್ವಾಗತ ಸಮಾರಂಭದಲ್ಲಿ ಧ್ವಜ ನಿಷೇಧಕ್ಕೆ ಉತ್ತರ ಕೇರಳದಲ್ಲಿ ಹಿಂದು ಸಮುದಾಯಗಳಲ್ಲಿ ಕೋಮು ವಿಷವನ್ನು ಹರಡಬಹುದು ಎಂದು ಕಾರಣ ನೀಡಲಾಗಿದ್ದು, ಇದು ಕೂಡಾ ಕಾರ್ಯಕರ್ತರನ್ನು ಗರಮ್ಮಾಗಿಸಿದೆ.