ಅನುದಾನ ಕೊಟ್ಟವರಿಗೆ ನನ್ನ ಮೊದಲ ಆದ್ಯತೆ: ಎಸ್.ಟಿ.ಸೋಮಶೇಖರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭಾ ಚುನಾವಣಾ ಮತದಾನ ಪ್ರಕ್ರಿಯೆ ಚುರುಕುಗೊಂಡಿದೆ. ಇದೇ ವೇಳೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮತದಾನದ ಕುರಿತು ಪ್ರತಿಕ್ರಿಯಿಸಿ, ಅನುದಾನ ಕೊಟ್ಟವರಿಗೆ ನನ್ನ ಮೊದಲ ಆದ್ಯತೆಯ ಮತ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ನಾನು ನಾಯಕರನ್ನು ಭೇಟಿಯಾಗಿಲ್ಲ. ನನ್ನ ಕ್ಷೇತ್ರಕ್ಕೆ ಯಾರು ಅನುದಾನ ನೀಡುತ್ತಿದ್ದಾರೆ, ಅವರಿಗೆ ನನ್ನ ಮತ, ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕುವುದು ಖಚಿತ ಎಂದರು.

ನಾನು ಆರು ವರ್ಷಗಳಿಂದ ಇದನ್ನೆಲ್ಲಾ ಅನುಸರಿಸುತ್ತಿದ್ದೇನೆ, ಅನುದಾನಕ್ಕಾಗಿ ಮೊದಲ ಪ್ರಾಶಸ್ತ್ರದ ಮತ.  ಹಾಗಾಗಿ ಈ ಬಾರಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ನನ್ನ ಕ್ಷೇತ್ರಕ್ಕೆ ಅನುದಾನದ ಭರವಸೆ ನೀಡಿದರೆ ಅದು ನನ್ನ ಮೊದಲ ಆದ್ಯತೆಯ ಮತ ಆಗಿರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!