ಶಿರಸಿಯ ಇಬ್ಬರು ಹಿರಿಯ ವಿದ್ವಾಂಸರಿಗೆ ಮೈತ್ರಿ ಪುರಸ್ಕಾರ

ಹೊಸದಿಗಂತ ವರದಿ ಶಿರಸಿ:

ಬೆಂಗಳೂರಿನ ಮೈತ್ರಿ ಸಂಸ್ಕೃತ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಮೈತ್ರಿ ಪುರಸ್ಕಾರ’ಕ್ಕೆ ಶಿರಸಿಯ ಇಬ್ಬರು ಹಿರಿಯ ವಿದ್ವಾಂಸರು ಆಯ್ಕೆಯಾಗಿದ್ದಾರೆ.

ವ್ಯಾಸ ಯೋಗ ವಿಶ್ವವಿದ್ಯಾಲಯ ಕುಲಪತಿ, ವೇದ ವಿಜ್ಞಾನ ಶೋಧ ಸಂಸ್ಥಾನದ ಅಧ್ಯಕ್ಷ, ಮೂಲತಃ ಯಲ್ಲಾಪುರ ತಾಲೂಕಿನ ಕೋಟೆಮನೆಯ ಪ್ರೊ.ರಾಮಚಂದ್ರ ಜಿ. ಭಟ್ಟ ಹಾಗೂ ಬಹುಶೃತ ವಿದ್ವಾಂಸ, ತಾಳಮದ್ದಲೆ ಅರ್ಥದಾರಿ, ಪ್ರವಚನಕಾರ, ನಿವೃತ್ತ ಪ್ರಾಚಾರ್ಯ, ವಿದ್ಯಾವಾಚಸ್ಪತಿ ತಾಲೂಕಿನ ಕೆರೆಕೈನ ಉಮಕಾಂತ ಕೃಷ್ಣ ಭಟ್ಟ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ನ.19 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ಪುರಸ್ಕಾರ ಸಮಾರಂಭ ನಡೆಯಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!