ಸಹಜ ಸ್ಥಿತಿಯತ್ತ ನಾಗ್ಪುರ: ಇಂದಿನಿಂದ ಕರ್ಫ್ಯೂ ಸಡಿಲಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಗ್ಪುರದಲ್ಲಿ ಮುಂದುವರೆದಿದ್ದ ಕರ್ಫ್ಯೂವನ್ನು ತೆಗೆದುಹಾಕುವ ಮೂಲಕ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಡಿಲಿಸಲಾಗಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಕೋತ್ವಾಲಿ, ತಹಸಿಲ್, ಗಣೇಶಪೇಟ್ ಮತ್ತು ಯಶೋಧರಾ ನಗರದಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ . ಕಾನೂನು ಜಾರಿ ಸಂಸ್ಥೆಗಳು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಶನಿವಾರ ಪಚ್ಪೌಲಿ, ಶಾಂತಿನಗರ, ಲಕಾಡ್ ಗಂಜ್, ಸಕ್ಕರ್ ದಾರಾ ಮತ್ತು ಇಮಾಮ್ ವಾಡಾದಲ್ಲಿನ ಕರ್ಫ್ಯೂವನ್ನು ಅಧಿಕಾರಿಗಳು ತೆಗೆದುಹಾಕಿದ್ದರು. ಇದಲ್ಲದೆ ಕೋತ್ವಾಲಿ, ತಹಸಿಲ್ ಮತ್ತು ಗಣೇಶಪೇಟ್​ನಲ್ಲಿ ಸಂಜೆ 7 ರಿಂದ ರಾತ್ರಿ 10 ರವರೆಗಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!