ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಎಣಿಕೆ: 2 ತಿಂಗಳಲ್ಲಿ ರೂ. 2 ಕೋಟಿ ಹಣ ಸಂಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಎಣಿಕೆ ಮಾಡಿದ್ದು, ಎರಡು ತಿಂಗಳಲ್ಲಿ ಎರಡು ಕೋಟಿ ರೂ. ಹಣ ಸಂಗ್ರಹವಾಗಿದೆ.

ಭಕ್ತರಿಂದ ಭಾರಿ ಕಾಣಿಕೆ ಬಂದಿದ್ದು, ನಾಲ್ಕು ಹುಂಡಿಯಲ್ಲಿ 2,04,08,923 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿ ಸುಮಾರು 40 ಕ್ಕೂ ಹೆಚ್ಚು ಮಂದಿ ಹುಂಡಿ ಎಣಿಕೆಯಲ್ಲಿ ಭಾಗಿಯಾಗಿದ್ದು, 120ಗ್ರಾಂ ಚಿನ್ನ, ಐದು ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ.

ವಿದೇಶಿ ಭಕ್ತರಿಂದಲೂ ಕಾಣಿಕೆ ದೊರೆತಿದ್ದು, 15 ವಿದೇಶಿ ಕರೆನ್ಸಿ ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ ಕೊರೋನಾ ಹಿನ್ನೆಲೆ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಎಲ್ಲ ನಿರ್ಬಂಧಗಳನ್ನು ತೆರೆದ ಕಾರಣ ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!