ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಗಾಂಧಿನಗರದಲ್ಲಿ ನಡೆದ ಜಾಗತಿಕ ಆಯುಷ್ ಮತ್ತು ಆವಿಷ್ಕಾರ ಸಮ್ಮೇಳನ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬೆಳಗ್ಗೆ ಭೇಟಿಯಾದ ಸಂದರ್ಭದಲ್ಲಿ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೊಸ್ ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಗುಜರಾತಿ ಹೆಸರಿಡಿ ಎಂದು ಕೇಳಿದರು. ಅದು ನನಗೆ ಈಗ ನೆನಪಿಗೆ ಬರುತ್ತಿದೆ. ನಾನು ಗುಜರಾತಿಯಾಗಿ ಡಾ.ಟೆಡ್ರೊಸ್ ಅವರನ್ನು ‘ತುಳಸಿಭಾಯ್ ‘ ಅಂತಾ ಕರೆಯುತ್ತೇನೆ ಎಂದು ಹೇಳಿದರು.
‘ತುಳಸಿಭಾಯ್’ ಎಂದು ಹೆಸರಿಡುತ್ತೇನೆ ಎಂದು ಮೋದಿ ಹೇಳುತ್ತಿದ್ದಂತೆ ಇಡೀ ಸಭೆಯು ನಗುವಿನ ಅಲೆಯಲ್ಲಿ ತೇಲಿತು.
ಇದೇ ವೇಳೆ ಪ್ರಧಾನಿ , ತುಳಸಿಭಾಯ್ ಹೆಸರಿಟ್ಟ ಬಗ್ಗೆಯೂ ವಿವರಣೆ ನೀಡಿದ್ದು, ಇಂದಿನ ಯುವ ಪೀಳಿಗೆ ತುಳಸಿ ಸಸಿಯನ್ನು ಮರೆಯುತ್ತಿದೆ. ಆದರೆ, ಎಷ್ಟೋ ಪೀಳಿಗೆಗಳಿಂದ ಪ್ರತಿ ಮನೆಯಲ್ಲಿ ತುಳಸಿ ಪೂಜೆ ಪರಂಪರೆಯಿಂದ ಬೆಳೆದುಕೊಂಡು ಬಂದಿದೆ. ಅಲ್ಲದೇ, ದೀಪಾವಳಿ ಸಂದರ್ಭದಲ್ಲಿ ತುಳಸಿ ಲಗ್ನವೂ ನಡೆಯುತ್ತಿದೆ. ‘ಭಾಯ್’ ಇಲ್ಲದೇ ಗುಜರಾತಿ ಹೆಸರಿಲ್ಲ. ಹೀಗಾಗಿ, ‘ತುಳಸಿಭಾಯ್’ ಎಂದು ಕರೆಯುವುದಾಗಿ ಮೋದಿ ತಿಳಿಸಿದರು.