ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಗಂಗಾ ನದಿಯ ದಡದಲ್ಲಿ ತಮ್ಮ ಪುತ್ರನ ನಿಶ್ಚಿತಾರ್ಥವನ್ನು ಮಾಡಿದ್ದಾರೆ.
ಕರಣ್ ಸಿಧು ಪಟಿಯಾಲದ ಇನಾಯತ್ ರಾಂಧವಾ ಜೊತೆ ಹಸೆಮಣೆ ಏರಲಿದ್ದು, ತಮ್ಮ ಸೊಸೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಬಹಳ ಸಾಧಾರಣವಾಗಿ ಗಂಗಾ ನದಿಯ ದಡದಲ್ಲಿ ಕುಟುಂಬದ ನಾಲ್ಕು ಜನ ಮಾತ್ರ ಸೇರಿದ್ದು, ಗಂಗೆಯಲ್ಲಿ ನಿಂತು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಲ್ಲಿನ ಫೋಟೊಗಳನ್ನು ಸಿಧು ಹಂಚಿಕೊಂಡಿದ್ದು, ನಮಗೆ ಸಂಭ್ರಮದ ಸಮಯ ಎಂದು ಹೇಳಿಕೊಂಡಿದ್ದಾರೆ.