ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ತನಿಖಾಧಿಕಾರಿ ಮಂಜುನಾಥ್ ಗೌಡ ಅವರು, ಶನಿವಾರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಆರೋಪಿ ಪ್ರವೀಣ್ ಅರುಣ್ ಚೌಗುಲೆ ಬರ್ಬರವಾಗಿ ಒಂದೇ ಮನೆಯ ನಾಲ್ವರನ್ನು ಕೊಲೆ ಗೈದಿದ್ದಾನೆ ಎಂಬುದನ್ನು ಸುಮಾರು 200 ಸಾಕ್ಷಿಗಳ ಸಹಿತ 2,202 ಪುಟಗಳ, 15 ವಾಲ್ಯೂಮ್ಸ್ ( volumes) ಹೊಂದಿದ ದೋಷಾರೋಪಣಾ ಪಟ್ಟಿಯಲ್ಲಿ ಸಲ್ಲಿಸಿದ್ದಾರೆ.
2024 ರ ನ.12 ರಂದು ನೇಜಾರಿನ ತೃಪ್ತಿ ನಗರದ ಮನೆಯೊಂದರಲ್ಲಿ ಬೆಳ್ಳಂ ಬೆಳಗ್ಗೆ ನಾಲ್ವರ ಕೊಲೆ ನಡೆದಿತ್ತು. ನ.15 ರಂದು ಪ್ರವೀಣ್ ಅರುಣ್ ಚೌಗುಲೆಯನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. ಸದ್ಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತಾಯಿ ಹಸೀನಾ ಸೇರಿದಂತೆ ಮಕ್ಕಳಾದ ಅಫ್ನಾನ್, ಐನಾಝ್ ಹಾಗು ಆಸೀಂ ನನ್ನು ಆರೋಪಿ ಕೊಲೆಗೈದು ಪರಾರಿಯಾಗಿದ್ದನು.