ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿ.ಎಂ ವಿಶ್ವಕರ್ಮ ಯೋಜನೆಗೆ ಸೇರ್ಪಡೆಗೊಳ್ಳದ 25 ವಹಿವಾಟುಗಳ ಕಸುಬುದಾರರಿಗೆ ಕಲೈನರ್ ಕೈವಿನೈ ತಿಟ್ಟಂ (ಕೆಕೆಟಿ) ಸಬ್ಸಿಡಿ ಸಾಲ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಜಾತಿ ಆಧಾರಿತ ವೃತ್ತಿ ವ್ಯವಸ್ಥೆ ಬಲಪಡಿಸುವ ಜೊತೆಗೆ 18 ವರ್ಷದ ಎಲ್ಲರಿಗೂ ಅರ್ಜಿ ಹಾಕಲು ಅವಕಾಶ ಕಲ್ಪಿಸಿರುವುದರಿಂದ, ಪಿ.ಎಂ ವಿಶ್ವಕರ್ಮ ಯೋಜನೆಗೆ ಸೇರಲು ತಮಿಳುನಾಡು ನಿರಾಕರಿಸಿದೆ. ವಿದ್ಯಾರ್ಥಿಗಳನ್ನು ಮತ್ತೆ ಶಿಕ್ಷಣಕ್ಕೆ ಕರೆತರುವುದು ಸರ್ಕಾರದ ಕರ್ತವ್ಯ. ಅವರನ್ನು ಅದರಿಂದ ಹೊರ ತಳ್ಳುವುದು ಅಥವಾ ಕುಟುಂಬದ ಪಾರಂಪರಿಕ ಉದ್ಯೋಗಕ್ಕೆ ಒತ್ತಾಯಿಸುವುದಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿಶ್ವಕರ್ಮ ಯೋಜನೆಯನ್ನು ಟೀಕಿಸಿದ್ದಾರೆ.