ಹೊಸದಿಗಂತ ವರದಿ, ಬನವಾಸಿ:
ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ನೂತನ ರಥ ನಿರ್ಮಾಣವಾಗಲಿದ್ದು, ನೂತನ ಮಹಾಸ್ಯನಂದ ರಥದ ಮರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು.
ಮಹಾಸ್ಯಂದ ರಥ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಗಿದ್ದು, 3 ಕೋಟಿ ರೂ ವಚ್ಚದಲ್ಲಿ ರಥ ನಿರ್ಮಾಣವಾಗಲಿದೆ. ದಾಸನಕೊಪ್ಪ ಸರ್ಕಲ್ ನಿಂದ ಬನವಾಸಿಯ ಪ್ರಮುಖ ಬೀದಿಗಳಲ್ಲಿ ರಥಕ್ಕೆ ನಿರ್ಮಾಣವಾಗಲಿರುವ ಮರದ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ ಹಾಗೂ ಪೂರ್ಣಕುಂಬದ ಸ್ವಾಗತ ಮಾಡಲಾಯಿತು. ದೇವಸ್ಥಾನದ ಮುಂಭಾಗ ರಥಕ್ಕೆ ನಿರ್ಮಾಣ ಮಾಡಲಿರುವ ಮರಗಳನ್ನು ತಂದು ಪೂಜೆ ಸಲ್ಲಿಸಲಾಯಿತು. ನಂತರ ರಥ ನಿರ್ಮಿಸಲಿರುವ ಶಿಲ್ಪಿಗಳಿಗೆ ವೀಳ್ಯ ಕೊಟ್ಟು ಅಧಿಕೃತವಾಗಿ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಕುಂಬಾಶಿಯ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಅವರಿಗೆ ರಥ ನಿರ್ಮಾಣಕ್ಕೆ 20 ಲಕ್ಷ ರೂ ಚೆಕ್ ನೀಡಿ ವೀಳ್ಯ ನೀಡಲಾಯಿತು.
1608 ರಲ್ಲಿ ಸೋಂದಾ ರಾಮಚಂದ್ರ ನಾಯಕ ಅವರು ಮಹಾಸ್ಯಂದನ ರಥ ನೀಡಿದ್ದರು. ಸುಮಾರು 400 ಹಿಂದಿನ ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ನೂತನ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಬಿಜೆಪಿ ಮುಖಂಡ ವಿ. ಎಸ್ ಪಾಟೀಲ್, ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಶಿವಯೋಗಿ ಉಳ್ಳಾಗಡ್ಡಿ ಇದ್ದರು.