Friday, June 2, 2023

Latest Posts

SHOCKING| 4ದಿನದ ಹಸುಳೆಯನ್ನು ತುಳಿದು ಕೊಂದ ಪೋಲೀಸರು: ತನಿಖೆಗೆ ಸಿಎಂ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಲ್ಕು ದಿನದ ಮಗುವನ್ನು ಪೊಲೀಸರು ತುಳಿದು ಕೊಂದಿದ್ದಾರೆ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ಕೊಸೊಗೊಂಡೋಡಿಘಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಈ ಬಗ್ಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ತನಿಖೆಗೆ ಆದೇಶಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇವೋರಿ ಪೊಲೀಸ್‌ನಲ್ಲಿ ಭೂಷಣ್ ಪಾಂಡೆ ಎಂಬ ವೃದ್ಧನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಸಂಗಮ್ ಪಾಠಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದರು. ಪೊಲೀಸರ ಆಗಮನವನ್ನು ಕಂಡು ಆರೋಪಿಗಳ ಕುಟುಂಬದವರೆಲ್ಲರೂ ಮನೆಯಿಂದ ಓಡಿಹೋದರು. ಆ ಸಮಯದಲ್ಲಿ ಮನೆಯಲ್ಲಿ ನಾಲ್ಕು ದಿನ ಮಗು ಮಾತ್ರ ಇದೆ. ಮಗು ಮಲಗಿದ್ದರಿಂದ ಕುಟುಂಬಸ್ಥರು ಮಗುವನ್ನು ಬಿಟ್ಟು ಹೊರಗೆ ಹೋಗಿದ್ದಾರೆ. ಪೊಲೀಸರು ಮನೆಯನ್ನು ಸ್ವಲ್ಪ ಹೊತ್ತು ಶೋಧಿಸಿ ಹೊರಟುಹೋದರು. ನಂತರ ಕುಟುಂಬ ಸದಸ್ಯರು ಮನೆಗೆ ಮರಳಿದ್ದಾರೆ. ಮಲಗಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಈ ಘಟನೆಯಿಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲಗಿದ್ದ ಮಗುವನ್ನು ಪೊಲೀಸರು ತುಳಿದು ಕೊಂದಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಸಂಜಯ್ ರಾಣಾ ತಿಳಿಸಿದ್ದಾರೆ. ಮತ್ತೊಂದೆಡೆ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಕೂಡ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!