ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಗ ಅವ್ಯಾನ್ ದೇವ್ ಅವರ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ಇಂದು ಅಕ್ಷಯ ತೃತೀಯ. ಹೀಗಾಗಿ ಈ ಶುಭ ದಿನದಂದು ಶಾರದಾ ಮಾತೆಯ ದರುಶನ ಪಡೆದು ಪುತ್ರ ಚಿ. ಅವ್ಯಾನ್ ದೇವ್ ಗೆ ಅಮ್ಮನವರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ .
ಅಕ್ಷರಾಭ್ಯಾಸದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಶ್ರೀ ಕ್ಷೇತ್ರ ಶೃಂಗೇರಿಗೆ ಕುಟುಂಬ ಸಮೇತ ಭೇಟಿ ನೀಡಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದುಕೊಂಡೆ. ಪರಮಪೂಜ್ಯರ ಅನುಗ್ರಹ, ಕಾರುಣ್ಯಕ್ಕೆ ನಾನು ಧನ್ಯ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
2021ರಲ್ಲಿ ಅವ್ಯಾನ್ ದೇವ್ ಅವರ ಜನನವಾಗಿದೆ. ಆಗಾಗ ತಂದೆ ಜೊತೆಗೆ ಆಟ ಆಡುವ ಅವ್ಯಾನ್ ದೇವ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.