ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆತ್ತ ಮಕ್ಕಳಿಗಾಗಿ, ತನ್ನ ಕುಟುಂಬಕ್ಕಾಗಿ ತಾಯಿ ತನ್ನ ಸರ್ವಸ್ವವನ್ನೆಲ್ಲಾ ತ್ಯಾಗ ಮಾಡುತ್ತಾಳೆ. ತುಂಬಾ ಪ್ರೀತಿ ಕೊಟ್ಟ ಬೆಳೆಸಿದ ತಾಯಿಯನ್ನು ನಿರ್ಲಕ್ಷಿಸಿ ಎಷ್ಟೋ ಮಕ್ಕಳು ಅವರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ತಮ್ಮ ಕೊನೆಯ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂಬ ಹಿರಿಯ ತಾಯಂದಿರ ನೋವು ಇದೀಗ ಎಲ್ಲರ ಮನಮುಟ್ಟಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಮನ ಮುಟ್ಟಿದೆ.
ಮೇಲುಕೂಡಲೂರಿನ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೀಲಗಿರಿ ಜಿಲ್ಲಾಧಿಕಾರಿ ಅರುಣಾ ಭಾಗವಹಿಸಿದ್ದರು. ವೃದ್ಧ ತಾಯಂದಿರು ತಮ್ಮ ದುಃಖ, ನೋವು, ಮಕ್ಕಳೊಂದಿಗೆ ದೂರವಾದ ಘಟನೆಯನ್ನು ನೃತ್ಯದ ರೂಪದಲ್ಲಿ ವಿವರಿಸುತ್ತಿದ್ದಂತೆ ವೃದ್ಧರ ಯಾತನೆ ಕಂಡು ಅಲ್ಲಿದ್ದವರಿಗೆಲ್ಲ ಸಹಿಸಲಾಗಲಿಲ್ಲ. ಜಿಲ್ಲಾಧಿಕಾರಿ ಅಳುತ್ತಿರುವ ದೃಶ್ಯವೂ ವೈರಲ್ ಆಗಿದೆ.
முதியோர் இல்லத்தில் கண்ணீர் மல்கிய நீலகிரி கலெக்டர்!#MuthiyorIllam #OldPeopleHouse #Oldpeople #Nilgiri #NilgiriCollector pic.twitter.com/wq74KFnk1b
— AvalVikatan (@AvalVikatan) October 11, 2023