ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಮುರುಗೇಶ್ ನಿರಾಣಿಯವರ 57ನೇ ಜನ್ಮ ದಿನಾಚರಣೆ ಹಿನ್ನೆಲೆ ಎಂಆರ್ಎನ್ ಫೌಂಡೇಷನ್ ವತಿಯಿಂದ 75 ಸೇವಾಮೃತ ಸಮಾಜಮುಖಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಬಿಳಗಿ ಮತ್ತು ಮುಧೋಳದಲ್ಲಿ ಉಚಿತ ಆರೋಗ್ಯ ತಪಾಸಣೆ, ಶಸ ಚಿಕಿತ್ಸಾ ಶಿಬಿರ, ಉಚಿತ ನೇತ್ರ ತಪಾಸಣೆ, ಉಚಿತ ಯೋಗಾಶಿಬಿರ, ತೆರಬಂಡಿ ಸ್ಪರ್ಧೆ, ಮಹಾವೃಕ್ಷ ಅಭಿಯಾನ, ಪಶು ಚಿಕಿತ್ಸೆಘಿ, ಕೃಷಿ ಅಭಿವೃದ್ಧಿ ಸಂಕಿರಣ, ಕಬ್ಬು ಅಭಿವೃದ್ಧಿ ಕಾರ್ಯಾಗಾರ, ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮವನ್ನು ಆಯೋಜಿಸಿದೆ.
ನಿರಾಣಿಯವರ ಅಭಿಮಾನಿಗಳು ಬಿಳಗಿಯ 500 ದೇವಸ್ಥಾನಗಳಲ್ಲಿ ವಿಶೇಷ ಮಹಾಪೂಜೆ, ದುರ್ಗ ಸಪ್ತಶದಿ ಹೋಮ, ಗೋಶಾಲೆಗಳಲ್ಲಿ ಗೋಪೂಜೆ, ಮೇವು ವಿತರಣೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಲ್ಲಿ ಹಣ್ಣುಹಂಪಲು ವಿತರಣೆ, ಅನಾಥಶ್ರಮ, ವೃದ್ಧಾಶ್ರಮಗಳಲ್ಲಿ ಹಣ್ಣು ಹಂಪಲು ಸಿಹಿ ವಿತರಣೆ ಮಾಡಿದರು. ಹಲವು ಸಕ್ಕರೆ ಕಾರ್ಖಾನೆಗಳಲ್ಲಿ ಮಹಾವೃಕ್ಷ ಅಭಿಯಾನವನ್ನು ಆಯೋಜಿಸಲಾಯಿತು.
ರಕ್ತದಾನ ಮಾಡಿದ ಶ್ರೀಗಳು
ಆಲಗೂರು ಗ್ರಾಮದಲ್ಲಿರುವ ಪಂಚಮಸಾಲಿ ಮೂರನೇ ಪೀಠದ ಆಲಗೂರು ಪೀಠಾಧಿಪತಿ ಮಹದೇವ ಶಿವಾಚಾರ್ಯ,ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಉಪಾಧ್ಯಕ್ಷ ಬೆಂಡವಾಡ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕುಂಚನೂರು ಮಠದ ಸಿದ್ದಲಿಂಗದೇವರು,
ನವಲಗುಂದ ಅಮರಗೋಳ ಮಠದ ಬಸವಾನಂದ ಸ್ವಾಮೀಜಿ,ಮಹೇಶ್ ಮತ್ಯಾ ಸ್ವಾಮೀಜಿ ಸೇರಿದಂತೆ ಹದಿನೈದು ಜನ ಸ್ವಾಮೀಜಿಗಳು ಹಾಗೂ ಮುರುಗೇಶ್ ನಿರಾಣಿ ಅಭಿಮಾನಿಗಳಿಂದಲೂ ರಕ್ತದಾನ ಮಾಡಲಾಯಿತು. ಜಮಖಂಡಿ ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.