ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಸೋನಾಕ್ಷಿ ಸಿಂಗ್ ವಿರುದ್ಧ ವಂಚನೆ ಆರೋಪ ಕೇಳಿಬರುತ್ತಿದ್ದು, ಈ ಹಿನ್ನೆಲೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ನಟಿ ಸೋನಾಕ್ಷಿ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬರುವುದಾಗಿ ಹೇಳಿ 37 ಲಕ್ಷ ರೂಪಾಯಿಗಳನ್ನು ಪಡೆದು ಕೈಕೊಟ್ಟಿದ್ದಾರೆ ಎಂಬ ಆರೋಪ ಇದೆ.
ಮೊರಾದಾಬಾದ್ನ ಕಟ್ಘರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಮೋದ್ ಶರ್ಮಾ ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ದೆಹಲಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಮುಂಗಡ ಹಣವಾಗಿ 37 ಲಕ್ಷ ರೂಪಾಯಿಗಳನ್ನೂ ನೀಡಲಾಗಿತ್ತು. ಆದರೆ ಬರುವುದಾಗಿ ಹೇಳಿದ್ದ ನಟಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ, ಮಾತ್ರವಲ್ಲದೇ ದುಡ್ಡನ್ನೂ ವಾಪಸ್ ಕೊಡಲಿಲ್ಲ. ಹೀಗಾಗಿ ನಟಿ ವಿರುದ್ಧ ಕೇಸ್ ಹಾಕಿದ್ದಾರೆ.
ಈವೆಂಟ್ ಆಯೋಜಕರಿಗೆ ಹಣ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದರಿಂದ ದೂರು ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗೆ ಕೋರ್ಟ್ನಿಂದ ಹಲವಾರು ಬಾರಿ ನೋಟಿಸ್ ಜಾರಿಯಾಗಿದ್ದರೂ ಸೋನಾಕ್ಷಿ ತಲೆ ಕೆಡಿಸಿಕೊಳ್ಳಲಿಲ್ಲ. ಖುದ್ದು ಆಗಲೀ, ವಕೀಲರ ಮೂಲಕವಾಗಲೀ ಕೋರ್ಟ್ಗೆ ಬರಲಿಲ್ಲ.ಈ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ನಟಿಗೆ ಬಂಧನದ ಭೀತಿ ಉಂಟಾಗಿದೆ.