June 28, 2026
Sunday, June 28, 2026
spot_img

ಭಯೋತ್ಪಾದನೆ ವಿರುದ್ಧ ಯಾವುದೇ ರಾಜಿ ಇಲ್ಲ: ನಾರ್ವೆಯಲ್ಲಿ ಪ್ರಧಾನಿ ಮೋದಿ ಖಡಕ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ಮೋದಿ ಖಡಕ್ ಸಂದೇಶ ನೀಡಿದ್ದಾರೆ.

ನಾರ್ವೆಯ ಓಸ್ಲೋದಲ್ಲಿ ಸ್ವೀಡನ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದ ಶೃಂಗಸಭೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ಜಾಗತಿಕ ಸಂಘರ್ಷಗಳ ವಿರುದ್ಧ ಭಾರತದ ನಿಲುವನ್ನು ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಒಂದೇ ಧ್ವನಿ

ಇಂದು ವಿಶ್ವವು ಯುದ್ಧಗಳು ಮತ್ತು ಅಶಾಂತಿಯ ವಾತಾವರಣದಲ್ಲಿ ಸಿಲುಕಿದ್ದು, ಇದರ ನಡುವೆ ಭಾರತ ಮತ್ತು ನಾರ್ಡಿಕ್ ದೇಶಗಳು ಭಯೋತ್ಪಾದನೆ ವಿರುದ್ಧ ಒಂದೇ ಧ್ವನಿಯಲ್ಲಿ ನಿಂತಿವೆ ಎಂದು ಪ್ರಧಾನಿ ಹೇಳಿದರು.

ಶಾಂತಿ ಸ್ಥಾಪನೆಗೆ ಬೆಂಬಲ

ಮಧ್ಯಪ್ರಾಚ್ಯದ ಬಿಕ್ಕಟ್ಟಾಗಿರಲಿ, ಯಾವುದೇ ಯುದ್ಧವಾಗಲಿ ಅವುಗಳೆಲ್ಲವನ್ನೂ ಕೊನೆಗೊಳಿಸಲು ಮತ್ತು ಶಾಂತಿಯನ್ನು ಮರುಸ್ಥಾಪಿಸಲು ಭಾರತ ಹಾಗೂ ನಾರ್ಡಿಕ್ ರಾಷ್ಟ್ರಗಳು ಜೊತೆಯಾಗಿ ಬೆಂಬಲಿಸಲಿವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !