ಮೈಸೂರಿನಲ್ಲಿ ನಾನು ಮಾಡಿದಷ್ಟು ಕೆಲಸ ಯಾರೂ ಮಾಡಿಲ್ಲ, ಟಿಕೆಟ್‌ ಕೈತಪ್ಪಲ್ಲ: ಪ್ರತಾಪ್‌ಸಿಂಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು-ಕೊಡಗು ಕ್ಷೇತ್ರದಲ್ಲಿ ನಾನು ಗೆದ್ದರೆ ಸಿದ್ದರಾಮಯ್ಯನವರ ಸೀಟು ಅಲುಗಾಡುತ್ತದೆ. ಆ ಮಟ್ಟದ ಭಯ ಇದೆ ಕಾಂಗ್ರೆಸ್ ಗೆ. ನಾನು ಸಂಸದನಾಗಿ ಎಲ್ಲರಿಗಿಂತ ಹೆಚ್ಚಿನ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಟಿಕೆಟ್ ಖಂಡಿತ ಸಿಕ್ಕೆಸಿಗುತ್ತೆ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಉತ್ತಮ ಕಾರ್ಯಕರ್ತರಾಗಿದ್ದರೂ, ಪ್ರತಾಪ್ ಸಿಂಹ ಅವರು ತಮ್ಮದೇ ಪಕ್ಷದಲ್ಲೇ ವಿರೋಧವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡುವುದು ಅನುಮಾನ. ಅವರ ಬದಲಿಗೆ ಮೈಸೂರು ಒಡೆಯರಾದ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್‌ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಊಹಾಪೋಹಗಳಿಗೆ ಯಾವಾಗ ತೆರೆ ಬೀಳಲಿದೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!