ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರ ಸಾವಿಗೆ ಕಾಂಗ್ರೆಸ್ ಜಪ ಮಾಡುತ್ತಿದೆ ಎನ್ನುವ ಮಾತು ಎಲ್ಲಾ ಕಡೆ ಹರಿದಾಡ್ತಿದೆ. ಆದರೆ ಇದು ಸುಳ್ಳು, ಈ ಆಲೋಚನೆ ನಮಗೆ ಬಂದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮಷ್ಟಕ್ಕೆ ತಾವೇ ಇಂಥ ಭಾವುಕ ಸನ್ನಿವೇಶ ಹುಟ್ಟುಹಾಕಿದ್ದಾರೆ. ಸಿದ್ದರಾಮಯ್ಯನನ್ನು ಮುಗಿಸಿಬಿಡಿ ಎಂದು ಅಶ್ವತ್ಥ ನಾರಾಯಣ್ ಅವರು ಬಹಿರಂಗವಾಗೇ ಹೇಳಿಲ್ವಾ? ನಮ್ಮ ಭಾವನೆಗಳು ಅಷ್ಟೊಂದು ಕೆಟ್ಟದಾಗಿಲ್ಲ, ಒಬ್ಬ ವ್ಯಕ್ತಿ ಯಾವಾಗ ಸಾಯ್ತಾರೋ ಅಂತ ಕಾಯೋವಷ್ಟು ಕೆಟ್ಟ ಮನಸ್ಥಿತಿ ನಮ್ಮದಲ್ಲ ಎಂದಿದ್ದಾರೆ.