ಒಂದು ಹನಿ ನೀರಿಗೂ ಗತಿ ಇಲ್ಲ.. ಆದ್ರೂ ಪಾಪಿ ಪಾಕಿಸ್ತಾನಕ್ಕೆ ಧಿಮಾಕು ಮಾತ್ರ ಕಮ್ಮಿಯಾಗಿಲ್ಲ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸರ್ಕಾರ ಹಾಗೂ ಮೋದಿ ಈಗಾಗಲೇ ಪಾಪಿ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಳಿಸಿದೆ, ಹಲವು ಕಠಿಣ ನಿರ್ಬಂಧಗಳನ್ನು ಹಾಕಿದ್ದರು ಕೂಡ ಪಾಕ್ ತನ್ನ ನೀಚ, ದುಷ್ಟ ಬುದ್ಧಿಯನ್ನು ಇನ್ನು ಬಿಟ್ಟಿಲ್ಲ. ಮತ್ತೊಮ್ಮೆ ರಣಹೇಡಿ ಪಾಕಿಸ್ತಾನ ತನ್ನ ನಾಲಿಗೆ ಹರಿಬಿಟ್ಟಿದೆ.

ಸಿಂಧೂ ನಮ್ಮದು. ನದಿ ನೀರು ಪಾಕಿಸ್ತಾನಕ್ಕೆ ಹರಿಯಬೇಕು. ಇಲ್ಲವಾದಲ್ಲಿ ಭಾರತೀಯರ ರಕ್ತ ಹರಿಯುತ್ತದೆ ಎಂದು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಅಧ್ಯಕ್ಷ ಬಿಲಾವಲ್‌ ಭುಟ್ಟೋ ನಾಲಿಗೆ ಹರಿಬಿಟ್ಟಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ, ಸಿಂಧೂ ನಮ್ಮದು. ಅದು ನಮ್ಮದೇ ಆಗಿರುತ್ತದೆ ಎಂದು ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ. ಇಲ್ಲದಿದ್ದರೆ ಅವರ ರಕ್ತ ಹರಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!