ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೈನಾನ್ಸ್ ಕಂಪನಿಯ ಅಧಿಕಾರಿಗಳು ಸಾಲ ವಸೂಲಾತಿ ಮೇಲೆ ಗರ್ಭಿಣಿ ಮೇಲೆ ಟ್ರಾಕ್ಟರ್ ಹರಿಸಿ ಕೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಡ ಕುಟುಂಬವೊಂದು ಫೈನಾನ್ಸ್ನಲ್ಲಿ ಸಾಲ ಪಡೆದಿತ್ತು ಎನ್ನಲಾಗಿದೆ. ಸಾಲ ವಸೂಲಿಗೆ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದರು.
ಟ್ರ್ಯಾಕ್ಟರ್ಗಾಗಿ ಕುಟುಂಬ ಸಾಲ ಪಡೆದಿತ್ತು. ಅಧಿಕಾರಿಗಳು ಟ್ರ್ಯಾಕ್ಟರ್ ವಾಪಾಸ್ ತೆಗೆದುಕೊಂಡು ಹೋಗಲು ಮುಂದಾಗಿದ್ದು, ವಾಹನ ಚಲಾಯಿಸಿದ್ದಾರೆ. ಈ ವೇಳೆ ಗರ್ಭಿಣಿ ಟ್ರ್ಯಾಕ್ಟರ್ ಮುಂದೆ ಬಂದು ನಿಂತಿದ್ದಾಳೆ, ಆಕೆ ಚಕ್ರದಡಿಗೆ ಸಿಲುಕಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗರ್ಭಿಣಿ ಮೃತಪಟ್ಟಿದ್ದಾರೆ.
ಫೈನಾನ್ಸ್ ಕಂಪನಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.