ಕಾಂಗ್ರೆಸ್ ಸಮಾವೇಶದಲ್ಲಿ ಇಬ್ಬರ ಮೇಲೆ ಏಳು ಜನ ಕಾಂಗ್ರೆಸ್ ಮುಖಂಡರಿಂದ ಚಾಕು ಇರಿತ

ಹೊಸ ದಿಗಂತ ವರದಿ, ವಿಜಯಪುರ:

ಕಾಂಗ್ರೆಸ್ ಸಮಾವೇಶದಲ್ಲಿ ಇಬ್ಬರ ಮೇಲೆ ಏಳು ಜನ ಕಾಂಗ್ರೆಸ್ ಮುಖಂಡರು ಸೇರಿಕೊಂಡು ಚಾಕುವಿನಿಂದ ಹಲ್ಲೆಗೈದಿರುವ ಘಟನೆ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನಹೀಮ್ ಮೆಹಬೂಬ್‌ಸಾಬ್ ತಾಂಬೋಲಿ, ನಿಹಾಲ್ ಮೆಹಬೂಬ್‌ಸಾಬ್ ತಾಂಬೋಲಿ ಹಲ್ಲೆಗೊಳಗಾದವರು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ಪುತ್ರ, ಕಾಂಗ್ರೆಸ್ ಮುಖಂಡ ಇರ್ಫಾನ್ ಶೇಖ್ ಸೇರಿದಂತೆ ಏಳು ಜನರು ಸೇರಿಕೊಂಡು ಇಬ್ಬರ ಮೇಲೆ ಚಾಕು ಹಾಗೂ ರಾಡ್‌‌ನಿಂದ ಹಲ್ಲೆಗೈದಿದ್ದಾರೆ ಎಂದು ನಿಹಾಲ್ ಆರೋಪಿಸಿದ್ದಾನೆ.

ಗಾಯಾಳುಗಳು ನಗರದ ಖಾಸಗಿ ಅಸ್ಪತ್ರೆಗೆ ದಾಖಲು ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬ್ಯಾನರ್ ಅಳವಡಿಸುವ ವೇಳೆ ಮುಶ್ರಿಫ್ ಪುತ್ರ, ಇರ್ಫಾನ್ ಶೇಖ್ ಹಾಗೂ ಬೆಂಬಲಿಗರಿಂದ ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!