ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ ಸಮಾರಂಭ ಕಳೆದ ವರ್ಷ ಜನವರಿ 22, 2024 ರಲ್ಲಿ ನಡೆಸಲಾಯಿತು. ಇಡೀ ಅಯೋಧ್ಯೆ ನಗರದಲ್ಲಿ ಕಳೆದ ವರ್ಷ ಈ ದಿನ ಭಕ್ತಸಾಗರ ಸೇರಿತ್ತು. ಅದಾಗಿ ಕಳೆದೊಂದು ವರ್ಷದಲ್ಲಿ ಅಯೋಧ್ಯೆಯಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಇತ್ತೀಚೆಗೆ ‘ಪ್ರತಿಷ್ಠ ದ್ವಾದಶಿ ಮಹೋತ್ಸವ’ವನ್ನು ಆಚರಿಸಿತ್ತು, ಇದು ರಾಮಲಲ್ಲಾನ ‘ಪ್ರಾಣ ಪ್ರತಿಷ್ಠೆ’ಯ ಒಂದು ವರ್ಷ ಆಚರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯವಾದ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಿದ್ದರು, ಇದರಲ್ಲಿ ವಿವಿಧ ಕ್ಷೇತ್ರಗಳ ಅನೇಕ ಜನಪ್ರಿಯ ಭಾಗವಹಿಸಿದ್ದರು.
ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ ‘ಪ್ರಾಣ ಪ್ರತಿಷ್ಠೆ’ ಸಮಾರಂಭದ ಒಂದು ವರ್ಷದ ನಂತರದ ಆಚರಣೆಗಳು ಹಿಂದೂ ಪಂಚಾಂಗವನ್ನು ಅನುಸರಿಸಿ ಜನವರಿ 11ಕ್ಕೆ ನಡೆಯಿತು. ಕಳೆದ ವರ್ಷ, ಈ ಪವಿತ್ರ ಕಾರ್ಯಕ್ರಮವನ್ನು ಹಿಂದೂ ಕ್ಯಾಲೆಂಡರ್ನ ಪೌಷ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಕೂರ್ಮ ದ್ವಾದಶಿಯಂದು ಆಚರಿಸಲಾಯಿತು. ಈ ವರ್ಷ, ಶುಕ್ಲ ಪಕ್ಷವು ಜನವರಿ 11 ರಂದು ಬಂದಿತು.
ಈ ಸಂದರ್ಭದ ಸ್ಮರಣಾರ್ಥವಾಗಿ, ದೇವಾಲಯದ ಆವರಣದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿಷ್ಠಾ ದ್ವಾದಶಿಯ ಸಂದರ್ಭದಲ್ಲಿ, ಪ್ರಭುವಿನ ಮಹಾ ಅಭಿಷೇಕವನ್ನು ನೆರವೇರಿಸಲಾಯಿತು, ನಂತರ ಮಂಗಳ ದರ್ಶನ ಮಾಡಲಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಶ್ರೀರಾಮನ ಮಹಾ ಅಭಿಷೇಕದ ಫೋಟೋಗಳನ್ನು ಹಂಚಿಕೊಂಡ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
#WATCH | Ayodhya, UP | Devotees throng to Shri Ram Janmbhoomi Temple in Ayodhya on the occasion of Ram Lalla’s ‘Pran Pratishtha’ completing 1 year.
Ravi from Hyderabad says, “We had been planning for three months for this date… Three days before we went to Prayagraj and took a… pic.twitter.com/CTJWnGbIrU
— ANI (@ANI) January 22, 2025