ಹೊಸದಿಗಂತ ಡಿಜಿಟಲ್ ಡೆಸ್ಕ್
ಸುಡಾನ್ನಿಂದ (Sudan) ಮತ್ತಷ್ಟು ಭಾರತೀಯರನ್ನು ಆಪರೇಷನ್ ಕಾವೇರಿ (Operation Kaveri) ಮೂಲಕ ಮುಂಬೈಗೆ ಕರೆತರಲಾಗಿದೆ. ಸುಡಾನ್ನಿಂದ ಭಾರತೀಯರು ಎರಡನೇ ಬ್ಯಾಚ್ ಇಂದು (ಏ.27) ಮಧ್ಯಾಹ್ನ ಮುಂಬೈಗೆ ಆಗಮಿಸಿದರು.
ಇಂದು ಮುಂಜಾನೆ ಜೆಡ್ಡಾದಿಂದ ಟೇಕ್ ಆಫ್ ಆದ ಭಾರತೀಯ ವಾಯುಪಡೆಯ ವಿಮಾನವು 246 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಕರೆತಂದಿದೆ. ಮತ್ತೊಂದು ಆಪರೇಷನ್ ಕಾವೇರಿ ಮೂಲಕ ಸೈನ್ಯದ ವಿಮಾನದಲ್ಲಿ ಭಾರತೀಯರು ಮುಂಬೈಗೆ ಬರುತ್ತದೆ. ಇನ್ನೂ 246 ಭಾರತೀಯರು ಭಾರತಕ್ಕೆ ಬರುತ್ತಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ನಿನ್ನೆ, 360 ಭಾರತೀಯರ ಮೊದಲ ಬ್ಯಾಚ್ ದೆಹಲಿಗೆ ಆಗಮಿಸಿದೆ.
Another #OperationKaveri flight comes to Mumbai.
246 more Indians come back to the motherland. pic.twitter.com/So7dlKO0z6
— Dr. S. Jaishankar (@DrSJaishankar) April 27, 2023
ಆಪರೇಷನ್ ಕಾವೇರಿ ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ.