ವಿರೋಧಿಗಳಿಗೆ ನನ್ನ ಭಯ ಇದೆ, ಜನಸಾಮಾನ್ಯರಿಗೆ ನನ್ನ ಭಯವಿಲ್ಲ: ಡಿ.ಕೆ ಸುರೇಶ್ ಅಚ್ಚರಿ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರೋಧಿಗಳಿಗೆ ನನ್ನ ಭಯ ಇದೆ. ಜನಸಾಮಾನ್ಯರಿಗೆ ನನ್ನ ಭಯವಿಲ್ಲ. ನಾನು ಚುನಾವಣೆಯಲ್ಲಿ ಗೆದ್ದರೆ ತಮ್ಮ ಭವಿಷ್ಯಕ್ಕೆ ಅಪಾಯವಾಗಬಹುದೆಂಬ ಭಯ ಅವರಿಗಿದೆ. ಅವರು ತಮ್ಮ ಅಸ್ತಿತ್ವವನ್ನು ಕಸಿದುಕೊಳ್ಳುವ ಭಯದಲ್ಲಿದ್ದಾರೆ. ಹಾಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ನನಗೆ ಎದುರಾಳಿ ಯಾರು ಇಲ್ಲ. ನನಗೆ ಕಾಣಿಸ್ತಾ ಇರೋದು ಮೋದಿಯವರೊಬ್ಬರೇ. ಅಭಿವೃದ್ಧಿಗೆ ವೋಟ್​ ಮಾಡಬೇಕು. ಅಭಿವೃದ್ಧಿ ಪಡ ವೋಟ್​ ಮಾಡ್ಬೇಕು. ನಾನು ಮಾಡಿರುವ ಕೆಲಸಗಳು ಪ್ರತಿಯೊಬ್ಬರನ್ನು ಮುಟ್ಟಿದೆ. ಜೊತೆಗೆ ಕನ್ನಡಿಗರ ತೆರಿಗೆ ಪಾಲು ಬಹಳ ಪ್ರಮುಖವಾಗಿ ಇವತ್ತು ಅನ್ಯಾಯವಾಗುತ್ತಿದೆ. ಅನ್ಯಾಯದ ಪರ ಧ್ವನಿ ಎತ್ತಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!