‘ನಮ್ಮ ಗುರುಗಳು ಸಿದ್ರಾಮುಲ್ಲ ಖಾನ್’: ಬಿಜೆಪಿ ನಾಯಕರಿಗೆ ಮಾತಲ್ಲೇ ಟಾಂಗ್ ಕೊಟ್ಟ ಜಮೀರ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪವಿತ್ರ ರಂಜಾನ್ ಹಬ್ಬ. ದೇಶಾದ್ಯಂತ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೆಂಗಳೂರಿನಲ್ಲಿ ತಮ್ಮ ಮುಸ್ಲಿಂ ಸಹೋದರರ ಸಾಮೂಹಿಕ ಪ್ರಾರ್ಥನೆಗೆ ಬೆಂಬಲ ನೀಡಿದರು. ಪ್ರಾರ್ಥನೆಯ ವೇಳೆ ಜಮೀರ್ ಅಹ್ಮದ್ ಖಾನ್ ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಕೂಡ ಇಂದು ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಆರೋಗ್ಯ ಸರಿಯಿಲ್ಲ. ಆದ್ದರಿಂದಲೇ ನನ್ನ ಮೂಲಕ ದೇಶದ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಬೇಕು ಎಂದರು.

ಪ್ರಾರ್ಥನೆ ವೇಳೆ ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರಂತೆ ಸಿದ್ರಾಮುಲ್ಲಾ ಖಾನ್ ನಮ್ಮ ಗುರುಗಳು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಅವರನ್ನ ವಿಪಕ್ಷದವರು ಸಿದ್ರಾಮುಲ್ಲಾ ಖಾನ್ ಅಂತಾರೆ. ಹಾಗಾಗಿ ನಮ್ಮ ಗುರುಗಳು ಸಿದ್ರಾಮುಲ್ಲ ಖಾನ್ ಅಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!