ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಮುನ್ನ ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ಭುಜದ ನೋವಿನ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯುವ ವೇಗಿ ಉಮ್ರಾನ್ ಮಲಿಕ್ ಭಾರತ ತಂಡ ಕೂಡಿಕೊಂಡಿದ್ದಾರೆ.
ಇನ್ನು ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಶಮಿ, ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಮೌನ ಮುರಿದಿದ್ದು, ಮತ್ತೊಮ್ಮೆ ಬಲಿಷ್ಠವಾಗಿಯೇ ಕಮ್ಬ್ಯಾಕ್ ಮಾಡುವ ಸುಳಿವು ನೀಡಿದ್ದಾರೆ.
Injury, in general, teaches you to appreciate every moment. I’ve had my share of injuries throughout my career. It’s humbling. It gives you perspective. No matter how many times I’ve been hurt, I’ve learned from that injury and come back even more stronger 💪🏻💪🏻💪🏻💪🏻💪🏻 pic.twitter.com/EsDLZd30Y7
— Mohammad Shami (@MdShami11) December 3, 2022
‘ಸಾಮಾನ್ಯವಾಗಿ, ಗಾಯಗಳು ನಮಗೆ ಪ್ರತಿಕ್ಷಣವನ್ನು ಗೌರವಿಸಲು ಪ್ರೋತ್ಸಾಹಿಸುತ್ತದೆ. ನಾನು ನನ್ನ ಜೀವನದುದ್ದಕ್ಕೂ ಸಾಕಷ್ಟು ಗಾಯಗಳನ್ನು ಎದುರಿಸಿದ್ದೇನೆ. ಈ ಗಾಯಗಳಿಂದ ನಾನು ವಿನೀತನಾಗಿದ್ದೇನೆ. ಈ ಗಾಯಗಳು ನಮಗೆ ಹೊಸ ಒಳನೋಟಗಳನ್ನು ನೀಡುತ್ತವೆ. ನಾನೆಷ್ಟು ಬಾರಿ ಗಾಯಗೊಂಡಿದ್ದೇನೆ ಎನ್ನುವುದಕ್ಕಿಂತ, ನಾನು ಆ ಗಾಯದಿಂದ ಕಲಿತಿದ್ದೇ ಹೆಚ್ಚು ಹಾಗೂ ಹಿಂದೆಂದಿಗಿಂತಲೂ ಮತ್ತಷ್ಟು ಸದೃಢವಾಗಿಯೇ ಕಮ್ಬ್ಯಾಕ್ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 04ರಂದು ಢಾಕಾ ಮೈದಾನದಲ್ಲಿ ಆರಂಭವಾಗಲಿದೆ.