ಮಹಾಕುಂಭಮೇಳದಲ್ಲಿ 40 ಕೋಟಿಗೂ ಅಧಿಕ ಭಕ್ತಾದಿಗಳಿಂದ ಪುಣ್ಯ ಸ್ನಾನ: ಇದು US, ಕೆನಡಾ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಸಜ್ಜುಗೊಂಡಿದೆ.ಪ್ರಯಾಗ್ ರಾಜ್ ನ ನದಿ ದಡದಲ್ಲಿ ತಾತ್ಕಾಲಿಕ ನಗರವೊಂದು ನಿರ್ಮಾಣಗೊಂಡಿದ್ದು, ಕುಂಭಮೇಳ ಸಂದರ್ಶಿಸಲು ಆಗಮಿಸುವ ಸುಮಾರು 40 ಕೋಟಿಗೂ ಅಧಿಕ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆದಿದೆ.

40 ಕೋಟಿಗೂ ಅಧಿಕ ಮಂದಿ 6 ವಾರಗಳ ಕಾಲ ನಡೆಯಲಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದು ಅಮೇರಿಕಾ, ಕೆನಡಾದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆ ಎಂಬುದು ಗಮನಾರ್ಹವಾಗಿದೆ.

ಪವಿತ್ರ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಧಾರ್ಮಿಕ ಶ್ರದ್ಧೆ ಮತ್ತು ಪುಣ್ಯ ಸ್ನಾನಗಳಿರುವ ಸಹಸ್ರಮಾನಗಳ ಹಿಂದಿನ ಆಚರಣೆಯನ್ನು ನಡೆಸಲಾಗುತ್ತದೆ.

ಜನವರಿ 13 ರಿಂದ ಫೆಬ್ರವರಿ 26 ವರೆಗೆ ಮಹಾಕುಂಭ ಮೇಳ ನಡೆಯಲಿದೆ. ಪ್ರಯಾಗ್ ರಾಜ್ ನ ನದಿಯ ದಡದಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ (15 ಸ್ಕ್ವೇರ್ ಮೈಲಿಗಳು) ಮಿನಿ ನಗರವೇ ತಲೆ ಎತ್ತಿದ್ದು ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಇಲ್ಲಿ ಮೂಲಸೌಕರ್ಯ ಕಲ್ಪಿಸಲು ವಿವಿಧ ಕಾಮಗಾರಿಗಳಲ್ಲಿ ತೊಡಗಿರುವ ಬಾಬು ಚಂದ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ನಾನು ಉದಾತ್ತ ಕಾರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ನಾನೂ ಸಹ ಇಂತಹ ಪವಿತ್ರ ಕಾರ್ಯಕ್ರಮಕ್ಕಾಗಿ ಕೊಡುಗೆ ನೀಡುತ್ತಿದ್ದೇನೆ ಎಂಬ ಭಾವ ನನ್ನಲ್ಲಿದೆ, ನಾನು ಮಾಡುತ್ತಿರುವುದು ಪುಣ್ಯಕಾರ್ಯದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಸುಮಾರು 350 ರಿಂದ 400 ಮಿಲಿಯನ್ ಭಕ್ತರು ಮೇಳಕ್ಕೆ ಭೇಟಿ ನೀಡಲಿದ್ದಾರೆ, ಆದ್ದರಿಂದ ನೀವು ಸಿದ್ಧತೆಗಳ ಪ್ರಮಾಣವನ್ನು ಊಹಿಸಬಹುದು ಎಂದು ಉತ್ಸವದ ವಕ್ತಾರ ವಿವೇಕ್ ಚತುರ್ವೇದಿ ಹೇಳಿದರು.

ಕುಂಭಮೇಳದ ಅಘಾಧತೆ ಮತ್ತು ಯಾರಿಗೂ ಯಾವುದೇ ಆಮಂತ್ರಣಗಳನ್ನು ಕಳುಹಿಸದೇ ಇದ್ದರೂ ಈ ಪ್ರಮಾಣದಲ್ಲಿ ಜನ ಸೇರುತ್ತಾರೆ ಎಂಬುದು ಈ ಕಾರ್ಯಕ್ರಮವನ್ನು ಅನನ್ಯವಾಗಿಸುವ ಅಂಶವಾಗಿದೆ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬರುತ್ತಾರೆ, ಶುದ್ಧ ನಂಬಿಕೆಯಿಂದ ನಡೆಸಲ್ಪಡುತ್ತಾರೆ ಎಂದು ಚತುರ್ವೇದಿ ತಿಳಿಸಿದ್ದಾರೆ.

ಧಾರ್ಮಿಕ ಸಿದ್ಧತೆಗಳ ಜೊತೆಗೆ, ಪ್ರಯಾಗ್‌ರಾಜ್ ಪ್ರಮುಖ ಮೂಲಸೌಕರ್ಯ ಕೂಲಂಕುಷ ಪರೀಕ್ಷೆಗೆ ಒಳಗಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೃಹತ್ ಪೋಸ್ಟರ್‌ಗಳು ನಗರದಲ್ಲಿ ರಾರಾಜಿಸುತ್ತಿವೆ. ಇಬ್ಬರೂ ರಾಜಕೀಯ ಮತ್ತು ಧರ್ಮ ಆಳವಾಗಿ ಹೆಣೆದುಕೊಂಡಿರುವ ಆಡಳಿತಾರೂಢ ಹಿಂದೂ-ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!