ಹೊಸದಿಗಂತ ವರದಿ ಯಲ್ಲಾಪುರ:
ಅರಬೈಲ್ ಘಟ್ಟದಲ್ಲಿ ಪೇಪರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಗುರುವಾರ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಂಡು ಸವಾರರು ಪರದಾಡುವಂತಾಗಿತ್ತು.
ಲಾರಿಯನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸ್ಥಗಿತಗೊಂಡಿದ್ದ ವಾಹನ ಸಂಚಾರ ಸುಗಮ ಗೊಳಿಸುವ ಕಾರ್ಯ ನಡೆಯಿತು.ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದ ಲಾರಿ ಬದಿ ಯಿಂದ ಬಸ್ಸು ಚಲಾಯಿಸಲು ಪ್ರಯತ್ನಿಸುದ್ದರಿಂದ ಅಲ್ಲಿಯೇ ಸಿಕ್ಕಿಕೊಂಡು ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬೀಗಡಾಯಿಸಿ . ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಿಲುಕಿಕೊಂಡು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಜೆಸಿಬಿ ತಲುಪಲು ಹರಸಾಹಸ ಪಡುವಂತಗಿತ್ತು.
ಯಲ್ಲಾಪುರ ದಿಂದ ಗುಳ್ಳಪುರ ದ ವರೆಗೆ ಸಾವಿರಾರು ವಾಹನಗಳು ರಸ್ತೆಯ ಎರಡು ಬದಿಗಳಲ್ಲಿ ಸಾಲುಗಟ್ಟಿನಿಂತಿದ್ದವು.ಹದ ಗೆಟ್ಟಿರುವ ರಸ್ತೆ ಹಾಗೂ ವಾಹನಗಳ ಮಧ್ಯ ತೂರಿ ಮುಂದೆ ಹೋಗಲು ಚಾಲಕರು ಹರಸಾಹಸ ಪಡುವಂತಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾ