ಬಿಜೆಪಿ ಜನರನ್ನು ಮತ್ತೆ ಗಲಭೆಗಳ ಕಾಲಕ್ಕೆ ಕೊಂಡೊಯ್ಯುತ್ತಿದೆ: ಓವೈಸಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ಜನರನ್ನು ತಪ್ಪುದಾರಿಗೆಳೆದು ಅವರು ಮತ್ತೆ 1990ರ ಗಲಭೆಗಳಿಗೆ ಹಿಂದಿರುಗುವಂತೆ ಮಾಡುತ್ತಿದೆ ಎಂದು ಸಂಸದ ಅಸಾಸುದ್ದೀನ್‌ ಓವೈಸಿ ಆರೋಪಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ನೊಂದಿಗೆ ಮಾತನಾಡಿರುವ ಅವರು “ಜ್ಞಾನವಾಪಿ ಮಸೀದಿಯನ್ನು ಸೀಲ್‌ ಮಾಡುವಂತೆ ಅವರು ನಿರ್ದೇಶಿಸಿದ್ದಾರೆ. ಆದರೆ ಮುಸ್ಲಿಮರಿಗೆ ಧಾರ್ಮಿಕ ಆಚರಣೆ ಮಾಡಲು ಸುಪ್ರಿಂ ಕೋರ್ಟ್‌ ಅವಕಾಶ ನೀಡಿದೆ. ಅಲ್ಲಿ ವಾಝು ಮಾಡಬಹುದು ಎಂದಿದೆ. ಸಮೀಕ್ಷೆಯ ಸಂದರ್ಭದಲ್ಲಿ ಹಿಂದೂಗಳು ಮಸೀದಿಯಲ್ಲಿ ಶಿವಲಿಂಗ ಕಂಡು ಬಂದಿದೆ ಎಂದರು ಮತ್ತು ನ್ಯಾಯಾಲಯದ ಆದೇಶ ತಪ್ಪು ಎಂದು ವಾದಿಸಿದರು. ಅದು ಶಿಲಿಂಗವಲ್ಲ ಬದಲಾಗಿ ಕಾರಂಜಿ. ಹೀಗೆ ಎಲವನ್ನೂ ಶಿವಲಿಂಗವೆನ್ನುತ್ತಹೋದರೆ ತಾಜ್‌ ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ. ಜನರನ್ನು ತಪ್ಪುದಾರಿಗೆಳೆದು ಬಿಜೆಪಿಯು 1990ರ ಗಲಭೆಯ ಸಂದರ್ಭಕ್ಕೆ ಹಿಂತಿರುಗುವಂತೆ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!