ಪಹಲ್ಗಾಮ್‌ ದಾಳಿ: ಗಾಯಗೊಂಡಿರುವ ಪುಣೆ ಮೂಲದ ಕುಟುಂಬಕ್ಕೆ ನೆರವು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ಪುಣೆ ಮೂಲದ ಜಗದಾಳೆ ಕುಟುಂಬದವರಿಗೆ ಮಹಾರಾಷ್ಟ್ರ ಸರ್ಕಾರ ನೆರವು ನೀಡುವುದಾಗಿ ಘೋಷಿಸಿದೆ.

ಉಗ್ರರ ದಾಳಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ನಡೆದ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಈ ದುಷ್ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕ್ರಮ ತೆಗೆದುಕೊಳ್ಳುವರು ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಪುಣೆಯ ಅಸಾವರಿ ಜಗದಾಳೆ, ಪ್ರಗತಿ ಜಗದಾಳೆ, ಸಂತೋಷ್‌ ಜಗದಾಳೆ, ಕೌಸ್ತುಭ ಜಗದಾಳೆ ಹಾಗೂ ಸಂಗೀತಾ ಗಬೋಟೆ ಜಮ್ಮು–ಕಾಶ್ಮೀರಕ್ಕೆ ತೆರಳಿದ್ದು, ಈ ಪೈಕಿ ಸಂತೋಷ್‌ ಹಾಗೂ ಕೌಸ್ತುಭ ಅವರಿಗೆ ಗುಂಡು ತಗುಲಿ, ಗಾಯಗಳಾಗಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!