ಹೊಸದಿಗಂತವರದಿ,ರಾಯಚೂರು :
ಹಿಂದು ಸಮಾಜದ ಯುವಕ, ಯುವತಿಯರನ್ನು ಗುರಿಯಾಗಿಸಿ. ಅವರನ್ನು ಪ್ರಚೋದಿಸಿ ಅವರಿಗೆ ಡ್ರಗ್ಸ್, ಮದ್ಯಪಾನ ಹಾಗೂ ಮಾದಕ ವಸ್ತುಗಳ ದಾಸರನ್ನಾಗಿ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಕುರಿತು ಪಾಲಕರು ಮಕ್ಕಳ ಕುರಿತು ಬಹಳ ಎಚ್ಚರ ವಹಿಸಬೇಕಾಗಿದೆ ಎಂದು ಆರ್ಎಸ್ಎಸ್ನ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ವಿಭಾಗದ ಪ್ರಮುಖರಾದ ಅರುಣ ಕುಮಾರ ಹೇಳಿದರು.
ಸೋಮವಾರ ನಗರದಲ್ಲಿ ವಿಜಯದಶಮಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಆರ್ಎಸ್ಎಸ್ ಪಥ ಸಂಚಲನದ ನಂತರ ವೀರಾಂಜನೇಯ ಮುನ್ನೂರುಕಾಪು ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಹಿಂದು ಯುವಕ, ಯುವತಿಯರ ಬ್ರೇನ್ ವಾಶ್ ಮಾಡಿ ಕುಟುಂಬದಲ್ಲಿನ ಮನ ಹಾಗೂ ಮನೆಯನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಈ ಕುರಿತು ಹಿಂದು ಸಮುದಾಯದ ಪಾಲಕರು ಮಕ್ಕಳ ಕುರಿತು ಬಹಳ ಜಾಗೃತಿ ವಹಿಸಬೇಕು. ಪ್ರಸಕ್ತ ಶೇ.೧೫ ಯುವ ಸಮುದಾಯ ಮಾದಕ ವ್ಯಸನಿಗಳಾಗಿದ್ದಾರೆ. ಇದು ವ್ಯವಸ್ಥಿತವಾದ ಕೃತ್ಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯಗಳ ಭಾರತೀಯ ಹಿಂದೂಗಳಿಗೆ ಒಂದು ಎಚ್ಚರಿಕೆ ಇದ್ದಂತೆ. ಈ ರೀತಿ ಮಾಡುವುದಕ್ಕೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಘಟನೆಗಳು ಜರುಗಿದರೆ, ಎಂತಹುದೇ ಆಘಾತಗಳು ಸಂಭವಿಸಿದರೆ ಅವೆಲ್ಲವನ್ನೂ ಎದುರಿಸುವ ಮನೋಧೈರ್ಯವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಜ್ಜನ ಶಕ್ತಿ ಜಾಗೃತವಾಗಿರುವುದು ಬಹಳ ಅವಶ್ಯಕವಾಗಿದೆ. ಇದನ್ನು ಸಮಾಜದೊಂದಿಗೆ ಸೇರಿ ಮಾಡಬೇಕಿದೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ದೇಶ ಪ್ರಗತಿ ಪಥದತ್ತ ಸಾಗುತ್ತಿರುವುದನ್ನು ಕಂಡು ವಿಶ್ವದ ಹತ್ತಾರು ಶಕ್ತಿಗಳು ಸೇರಿ ಇದನ್ನು ತಡೆಯುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಆದರೆ ಸಂಘದಿoದ ಬಂದಿರುವ ಪ್ರಧಾನಮಂತ್ರಿಗಳಿರುವುದರಿoದ ಅದು ಸಾದ್ಯವಾಗುತ್ತಿಲ್ಲ. ಸಂಘದಲ್ಲಿ ಕಲಿತಿರುವ ಪಾಠಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಬಹಳ ಗಟ್ಟಿಯಾಗಿದೆ. ಹೀಗಾಗಿ ಇಂದು ಅಮೇರಿಕದ ಬೈಡನ್ನರಿಗೂ ಮತ್ತು ರಷ್ಯಾದ ಪುಟಿನ್ನರಿಗೂ ಬೇಕಾಗಿದ್ದಾರೆ ಮೋದಿಯವರು ಎಂದರು.
ಆರ್ಎಸ್ಎಸ್ ದೇಶಕ್ಕೆ ಇಬ್ಬರು ಪ್ರಧಾನಿಯವರನ್ನು ನೀಡಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಬದಲ್ಲಿ ಪ್ರೋಕ್ರಾನಿನಲ್ಲಿ ಅಣು ಪರೀಕ್ಷೆ ಮಾಡಲಾಯಿತು ಈ ಸಂದರ್ಭದಲ್ಲಿ ಅಮೇರಿಕ ಅನೇಕ ದಿಗ್ಬಂಧನಗಳನ್ನು ಹಾಕಿದರೂ ಅದಕ್ಕೆ ಮಹತ್ವವನ್ನು ನೀಡಿದೇ ದೇಶವನ್ನು ಮುನ್ನಡೆಸಿದ ಕೀತಿ ಅವರಿಗೆ ಸಲ್ಲುತ್ತದೆ ಅಲ್ಲದೆ ಆ ನಂತರದಲ್ಲಿ ಅಮೇರಿಕ ವಿಧಿಸಿದ ಎಲ್ಲ ದಿಗ್ಬಂಧನಗಳನ್ನು ಅದೇ ತೆರವುಗೊಳಿಸುವಂತಾಯಿತು ಇದು ಭಾರತದ ತಾಕತ್ತು. ಈಗ ಭಾರತ ತನ್ನ ಗಟ್ಟಿಯಾದ ವಿದೇಶಿ ನೀತಿಗಳಿಂದಾಗಿ ವಿಶ್ವದ ಎಲ್ಲ ದೇಶಗಳಿಗೂ ಬೇಕಾಗುವ ಮೂಲಕ ವಿಶ್ವ ಗುರುವಾಗುವತ್ತ ದಾಪುಗಾಲು ಹಾಕುತ್ತಿದೆ ಇದು ಸಂಘದಲ್ಲಿರುವ ಶಕ್ತಿ ಎಂದು ಹೇಳಿದರು.
ಸಂಘದ ಶಾಖೆಗಳಲ್ಲಿ ದೇಶದ ಪ್ರಗತಿಗೆ ಪೂರಕವಾಗುವ ಉತ್ತಮ ಮೌಲ್ಯಯುವ ವಿಚಾರಗಳನ್ನು ಚರ್ಚಿಸಲಾಗುತ್ತದೆ, ಕಲಿಸಲಾಗುತ್ತದೆ. ಸಂಘದ ಶಾಖೆಗಳನ್ನು ಪ್ರತಿ ಓಣಿ, ಗಲ್ಲಿಗಳಲ್ಲಿಯಲ್ಲದೆ ಪ್ರತಿ ಗ್ರಾಮಗಳಲ್ಲಿಯೂ ತೆರೆಯುವುದಕ್ಕೆ ಮುಂದಾಗಬೇಕು. ಇದರಿಂದ ಹಿಂದೂ ಸಂಸ್ಕೃತಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹಿಂದೂ ಧರ್ಮ, ಸಮಸ್ಕೃತಿಗೆ ಧಕ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಸಕ್ತ ಆರ್ಎಸ್ಎಸ್ ಇರುವುದರಿಂದಲೇ ಈ ಧರ್ಮದ ಮೇಲೆ ಅನ್ಯರ ದಾಳಿ ಆಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ೮೧೫ ವಿಮಾನ ಅಪಹರಣವಾದಾಗ ಬಾರತದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಆದರೆ, ಅಮೇರಿಕದಲ್ಲಿ ಜೋಡಿ ಕಟ್ಟಡಗಳ ಮೇಲಾದ ದಾಳಿಯ ಸಂದರ್ಭದಲ್ಲಿ, ಜಪಾನ್ ವಿಮಾನದಲ್ಲಿ ಬೆಂಕಿ ಸಂಭವಿಸಿದ ಸಂದರ್ಭದಲ್ಲಿ ಇದಲ್ಲದೆ ಇಸ್ರೇಲಿನ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ನಾಗರೀಕರು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡದೇ ಸರ್ಕಾರ ಕೈಗೊಳ್ಳುವ ಕಾರ್ಯಗಳಿಗೆ ಬೆಂಬಲವಾಗಿ ನಿಂತರು. ಇದು ಸರ್ಕಾರವನ್ನು ನಡೆಸುವವರ ಆತ್ಮ ಸ್ಥೆöÊರ್ಯವನ್ನು ತುಂಬುವುದಾಗಿದೆ ಆದರೆ ಭಾರತದಲ್ಲಿ ಇಂತಹ ಘಟನೆಗಳು ಸಂಭವಿಸಿದರೆ ವಿದೇಶಿ ಶಕ್ತಿಗಳು ಇಲ್ಲಿನವರೊಂದಿಗೆ ಸೇರಿ ಪ್ರತಿಭಟನೆಗಳನ್ನು ಮಾಡಿಸುವ ಮೂಲಕ ದೇಶದಲ್ಲಿ ಅರಾಜಕತೆಯನ್ನು ಸೃಷ್ಠಿಸುವುದಕ್ಕೆ ಪ್ರಯತ್ನಿಸುತ್ತವೆ ಇತ್ತಿಚೆಗೆ ಕಲೆ ಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಸಮರ್ಪಕವಾಗಿ ನಿಭಾಯಿಸುವ ಮೂಲಕ ವಿಫಲಗೊಳಿಸಿರುವುದನ್ನು ಘಟನೆಗಳ ಸಹಿತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ನವೀನಬಾಯ್ ಶೋತ್ರಿಯಾ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಘಚಾಲಕರಾದ ಸದಾನಂದ ಪ್ರಭು ಇದ್ದರು.