ಫೋನ್‌ ಸರಿಮಾಡಿಸಿಕೊಡೋದಕ್ಕೆ ನಿರಾಕರಿಸಿದ ಪೋಷಕರು: ಮನನೊಂದು ಯುವತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆಲಂಗಾಣದ ಮಂಚೇರಿಯಲ್‌ ಜಿಲ್ಲೆಯ ಜೈಪುರ ಮಂಡಲದ ವೆಲಾಲ ಗ್ರಾಮದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೋಷಕರು ಹಾಳಾಗಿದ್ದ ಸ್ಮಾರ್ಟ್‌ ಫೋನ್‌ ರಿಪೇರಿ ಮಾಡಿಸಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. 19 ವರ್ಷದ ಸೈಶುಮಾ ಮೃತರು.

ಸೈಶುಮಾ ಪೋಷಕರು ಗದ್ದೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಫೋನ್‌ ರಿಪೇರಿ ಮಾಡಿಸಲು ಒಪ್ಪಿಲ್ಲ. ಇದರಿಂದ ಮನನೊಂದ ಸೈಶುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!