ಪಠಾಣ್ ಅಪ್ಪಟ ದೇಶಭಕ್ತಿ ಸಾರುವ ಸಿನಿಮಾ: ಶಾರುಖ್ ಖಾನ್ ಬಣ್ಣನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಬಾಯ್ಕಾಟ್ ಸದ್ದಿನ ನಡುವೆ ಪಠಾಣ್ ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆಯುತ್ತಿದೆ.”

ಟ್ರೈಲರ್ ರಿಲೀಸ್ ಬಳಿಕ ಸಿನಿಮಾ ವಿರುದ್ಧ ದೇಶದಲ್ಲಿ ಅನೇಕ ಜನರು ವಿರೋಧ ವ್ಯಕ್ತಪಡಿಸಿದ್ದು, ಅದ್ರಲ್ಲೂ ಬೇಷರಮ್ ಹರಿನ ವಿರುದ್ಧ ಟೀಕೆಗಳ ಸುರಿಮಳೆ ಶುರುವಾಗಿದೆ.

ಇದೀಗ ಇದರ ನಡುವೆ ಸಿನಿಮಾ ಕುರಿತು ನಾಯಕ ನಟ ಶಾರುಖ್ ಖಾನ್ ಮಾತನಾಡಿದ್ದು, ಅಪ್ಪಟ ದೇಶಭಕ್ತಿ ಸಾರುವ ಸಿನಿಮಾ ಎಂದಿದ್ದಾರೆ .

ಉಗ್ರವಾದಿಗಳು ಮತ್ತು ಭಾರತದ ರಕ್ಷಣೆ ಹೊತ್ತ ‘ರಾ’ ಏಜೆಂಟ್ ನಡುವಿನ ಕಥಾಹಂದರ ಇದಾಗಿದ್ದು, ದೇಶದ ಅಪ್ಪಟ ಪ್ರೇಮಿಯೊಬ್ಬ ಭಯೋತ್ಪಾದಕರನ್ನು ಹೇಗೆ ಹಿಮ್ಮೆಟ್ಟಿಸುತ್ತಾನೆ ಎನ್ನುವ ಸಾರವನ್ನು ಈ ಸಿನಿಮಾ ಹೊಂದಿದೆ. ಹೀಗಾಗಿಯೇ ಇದೊಂದು ಅಪ್ಪಟ ದೇಶಭಕ್ತಿ ಸಾರುವ ಸಿನಿಮಾ ಎಂದಿದ್ದಾರೆ.

ಸಿನಿಮಾದಲ್ಲಿ ನಟ ಜಾನ್ ಅಬ್ರಾಹಂ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾಣಸಿಕೊಂಡಿದ್ದರೆ, ಶಾರುಖ್ ರಾ ಏಜೆಂಟ್ ಪಾತ್ರವನ್ನು ಮಾಡಿದ್ದಾರೆ.

ಈಗಾಗಲೇ ಪಠಾಣ್ ಸಿನಿಮಾದ ಹಾಡಿನಲ್ಲಿ ಭಾವನೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಅಭಿಯಾನ ಶುರುವಾಗಿದೆ. ಈ ಸಂದರ್ಭದಲ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಕಥೆಯಿಂದಾಗಿ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!