ಹೊಸದಿಗಂತ ವರದಿ ವಿಜಯಪುರ:
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಪತ್ರಾಸ್ ಶೆಡ್ಗೆ ಬೆಂಕಿ ತಗುಲಿ, ದವಸ, ಧಾನ್ಯ ಭಸ್ಮವಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಇಂದಿರಾನಗರದಲ್ಲಿ ನಡೆದಿದೆ.
ಇಲ್ಲಿನ ನೆಹಾಲ್ ನಬೀಸಾಬ ಜಮಾದಾರ ಎಂಬವರ ಪತ್ರಾಸ್ ಶೆಡ್ ಗೆ ಬೆಂಕಿ ತಗುಲಿ ಹತ್ತು ಸಾವಿರ ನಗದು, ಒಂದುವರೆ ತೊಲೆ ಬಂಗಾರ, ಒಂದು ಚೀಲ ಜೋಳ,ಒಂದು ಚೀಲ ಗೋದಿ, ಎರಡು ಚೀಲ ಅಕ್ಕಿ ಸೇರಿದಂತೆ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.