ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಜನಸೇನಾ ಸಂಸ್ಥಾಪಕ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಬೆಂಗಳೂರು ನಗರ ಪ್ರದೇಶದ ಆನೇಕಲ್ ನಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಪರ ಪವನ್ ಕಲ್ಯಾಣ್ ದರಗುಪ್ಪೆ, ಅತ್ತಿಬೆಲೆ, ಚಂದಾಪುರ, ಹೆಬ್ಬಗೋಡಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಪವನ್ ಕಲ್ಯಾಣ್ ಬಿದರಗುಪ್ಪೆಯಿಂದ ಬೈಕ್ ರ್ಯಾಲಿಯೊಂದಿಗೆ ಬೃಹತ್ ಪ್ರಚಾರ ನಡೆಸಿದ ನಂತರ ರೋಡ್ ಶೋ ಮೂಲಕ ಮತ ಯಾಚಿಸಲಿದ್ದಾರೆ ಎನ್ನಲಾಗಿದೆ.