ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರಿನ ಪಂಡಿತನಹಳ್ಳಿ ಗ್ರಾಮದ ಸಮೀಪದ ಮಾರನಾಯಕನಪಾಳ್ಯದಲ್ಲಿ ನವಿಲು ಬೇಟೆಯಾಡಿ ಅದರ ಮಾಂಸ ತಿಂದ ಮೂವರನ್ನು ಬಂಧಿಸಲಾಗಿದೆ.
ಇಟ್ಟಿಗೆ ಭಟ್ಟಿಯಲ್ಲಿ ಮೂವರು ನವಿಲು ಮಾಂಸವನ್ನು ತಿನ್ನುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮೂವರು ಕಾರ್ಮಿಕರನ್ನು ಬಂಧಿಸಲಾಗಿದೆ. ಒಟ್ಟಾರೆ ಒಂದೂವರೆ ಕೆಜಿ ಮಾಂಸ, ಗರಿ, ಬಲೆ ಅಡುಗೆ ಮಾಡಲು ಬಳಸಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.