ದಿಗಂತ ವರದಿ ಹಾಸನ :
ಕಾಂಗ್ರೆಸ್ ಮಾಡಿದ ದುರಾಡಳಿತದಿಂದ ಈ ದೇಶದ ಜನ ಬೇಸತ್ತು ಹಂತ ಹಂತವಾಗಿ ಕಾಂಗ್ರೆಸ್ನಿಂದ ದೂರು ಸರಿಯುತ್ತಿದ್ದಾರೆ. ಕಾಂಗ್ರೆಸ್ ನ ದುರಾಡಳಿತದಿಂದಲೇ ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯದಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ ಎಂದು ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಂಗಡಹಳ್ಳಿ ಗ್ರಾಮದಲ್ಲಿ ಬಿಜೆಪಿ ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹದಿನೆಂಟು ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ . ಈ ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯದಲ್ಲಿ ಮಾತ್ರ ಆಡಳಿತದಲ್ಲಿದೆ. ಕಾಂಗ್ರೆಸ್ ಮಾಡಿದ ದುರಾಡಳಿತದಿಂದ ಈ ದೇಶದ ಜನ ಬೇಸತ್ತು ಹಂತಹಂತವಾಗಿ ಕಾಂಗ್ರೆಸ್ನಿಂದ ದೂರು ಸರಿಯುತ್ತಿದ್ದಾರೆ ಎಂದರು.
ನಾನು ಒಂದು ವರ್ಷ ಎಂಟು ತಿಂಗಳು ಮುಖ್ಯಮಂತ್ರಿ ಆಗಿದ್ದೆ. 150 ಕೋಟಿ ಇರುವ ಈ ದೇಶದಲ್ಲಿ INDIA ಯಿಂದ ಪ್ರಧಾನಮಂತ್ರಿ ಆಗಿ ಕೆಲಸ ಮಾಡುವ ಮಹಾನುಭಾವ ಯಾರಿದ್ದಾರೆ. ಈ ಕಾಂಗ್ರೆಸ್ನ ನಂಬಿ ಬಲಿಯಾದೆ. ನಾನು ಮಾಡುವ ಆಡಳಿತವನ್ನು ಕಾಂಗ್ರೆಸ್ನವರು ಸಹಿಸಲಿಲ್ಲ. ಈ ನಿಟ್ಟಿನಲ್ಲಿ ಇವತ್ತು ಮೋದಿ ಪ್ರಧಾನಮಂತ್ರಿ ಆಗಬೇಕು ಎಂದಿದ್ದಾರೆ.
ಆ ಸ್ಥಾನದಲ್ಲಿ ಕೂರುವ ಯೋಗ್ಯತೆ ಯಾರಿಗಿದೆ?
ಏ.18 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಸನ ಜಿಲ್ಲೆಯ ಆರು ಕಡೆ ಭಾಷಣ ಮಾಡಿ ಪ್ರಜ್ವಲ್ರೇವಣ್ಣ ಅವರನ್ನು ಸೋಲಿಸ್ತಿನಿ ಅಂತ ಹಠ ತೊಟ್ಟಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಸೋಲಿಸೆಯೇ ಸೋಲುಸ್ತಿನ ಅಂತಿದ್ದಾರೆ. ಈ ಮೂರು ಕಡೆ ತೆಗೆದರೆ ಜೆಡಿಎಸ್ ಸಂಪೂರ್ಣ ನಾಶ ಆಗುತ್ತೆ. ಇದು ಸಿದ್ದರಾಮಯ್ಯ ಅವರ ಪಣ. ಅವರು ಹೋಗುವ ವೇಗ ನಮಗಿಲ್ಲ. ಒಬ್ಬ ಮಂತ್ರಿ ಕೈಯಲ್ಲಿ ಇಡೀ ಬೆಂಗಳೂರು ಇದೆ. ಹಣದ ಡೈರಿ ಈ ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆಯುತ್ತೆ ಇಲ್ಲಿಂದ ಬಾಚಿ ಅಲ್ಲಿಗೆ ಕಳ್ಸೋದು, ಇವರು ತಿನ್ನೋದು. ಇಲ್ಲ ಅಂತ ಹೇಳಲಿ ನಾನು ಸಾಬೀತು ಮಾಡ್ತಿನಿ ಎಂದು ಆಕ್ರೋಶವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ 18 ತಾರೀಖು ಹಾಸನಕ್ಮೆ ಬಂದು ಹೋಗಲಿ ನಾನು ನಂತರ ಮಾತನಾಡುತ್ತೇನೆ. ಈ ರಾಜ್ಯದ ಬೆಂಗಳೂರಿನಲ್ಲಿದೆ, ಅದನ್ನು ಲೂಟಿ ಮಾಡಿ ಎಲ್ಲಾ ರಾಜ್ಯಗಳಿಗೂ ಹಣ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ಗಳಿಸಲು ಆಗಲಿಲ್ಲ. ಅದಕ್ಕೆ ಕಾರಣ ಅವರು ಮಾಡಿದ ದುಷ್ಕೃತ್ಯ. ಇವತ್ತು ಕರ್ನಾಟಕದಲ್ಲಿ ದುಷ್ಕೃತ್ಯ ನಡಿತಿದೆ.
ಬಿಜೆಪಿಯವರು ಹಠ ಮಾಡಿ ನನ್ನ ಅಳಿಯನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಮುಂದೆ ಅವರು ಎತ್ತರದ ಸ್ಥಾನಕ್ಕೆ ಹೋಗಿದ್ದಾರೆ. ನನ್ನ ಅಳಿಯ ಮಂಜುನಾಥ್ 8.5 ಲಕ್ಷ ಜನರಿಗೆ ಉಚಿತ ಆಪರೇಷನ್ ಮಾಡಿದ್ದಾರೆ. ಅವರ ಹತ್ತಿರ ಒಂದೂ ರೂಪಾಯಿ ತಗೊಂಡಿಲ್ಲ. ಅವರನ್ನು ಡಿ.ಕೆ.ಶಿವಕುಮಾರ್ ಸೋಲಿಸಲು ಮೂರು ಜನ ಮಂಜುನಾಥ್ ಹುಡುಕಿ, ಹುಡುಕಿ ನಿಲ್ಲಿಸಿದ್ದಾರೆ.ಇಷ್ಟು ಹೀನಾಯವಾಗಿ ರಾಜಕಾರಣ ಮಾಡುವ ವ್ಯಕ್ತಿ ಮತ್ತೊಬ್ಬ ಸಿಗಲ್ಲ. ಡಿ.ಕೆ.ಶಿವಕುಮಾರ್ ಅಂತಹ ನಾಯಕ ಒಕ್ಕಲಿಗರಲ್ಲಿ ಇನ್ಯಾರು ಸಿಗಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ನಂಬಿದವರಿಗೂ ಮೋಸ ಮಾಡಿಲ್ಲ. ಇವರ ಸರ್ಕಾರನೇ ಗ್ಯಾರೆಂಟಿ ಇಲ್ಲ, ಇವರು ಗ್ಯಾರೆಂಟಿ ಕೊಡುತ್ತಾರೆ. ಈ ಚುನಾವಣೆ ಆದಮೇಲೆ ಏನೇನ್ ಆಗುತ್ತೆ ನೋಡಿ. ನಾವ್ಯಾರೋ ಸರ್ಕಾರ ತೆಗೆಯಲ್ಲ ಅದಾಗೆ ಅದೇ ಹೋಗುತ್ತೆ ಎಂದು ಭವಿಷ್ಯ ನುಡಿದರು.