ಹೊಸ ದಿಗಂತ ವರದಿ,ಮೈಸೂರು:
ದೆಹಲಿ ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದು, ಇತ್ತ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ದೂರಾಗಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂಜ್ ಕೇಜ್ರಿವಾಲ್ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.
ಎಎಪಿ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದನ್ನು ಅವರು ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಜನರು ಕಾಂಗ್ರೆಸ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳಿರುವ ಕೇಜ್ರಿವಾಲ್, ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎಎಪಿ ವಿರುದ್ಧ ಕೈಜೋಡಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಎಎಪಿಯನ್ನು ಸೋಲಿಸಲು ಒಟ್ಟಾಗಿ ಹೋರಾಡುವುದಾಗಿ ಘೋಷಿಸಬೇಕು. ಜನರು ಕಾಂಗ್ರೆಸ್ ಅನ್ನು ಗಂಭೀರವಾಗಿ ಪರಿಗಣಿಸುವುದನ್ನು ಈಗಾಗಲೇ ನಿಲ್ಲಿಸಿದ್ದಾರೆ ಎಂದರು.
ಅಂತೆಯೇ, ದೆಹಲಿಯಲ್ಲಿ 12 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ನೀರು ಸರಬರಾಜು ಮಾಡುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಕೇಜ್ರಿವಾಲ್, ‘ಎಎಪಿಯ ಆಡಳಿತ ಮಾದರಿಯು ನಿರಂತರವಾಗಿ ಭರವಸೆಗಳನ್ನು ಈಡೇರಿಸಿದೆ. ಆದಾಗ್ಯೂ, ನನ್ನ ಅನುಪಸ್ಥಿತಿಯಲ್ಲಿ ಸಮಸ್ಯೆಗಳು ಉದ್ಭವಿಸಿದವು, ಇದರ ಪರಿಣಾಮವಾಗಿ ಅನೇಕ ನಿವಾಸಿಗಳಿಗೆ ನೀರಿನ ಬಿಲ್ಗಳು ವಿಪರೀತವಾಗಿ ಹೆಚ್ಚಾದವು.
ತಮ್ಮ ಬಿಲ್ಗಳು ತಪ್ಪು ಎಂದು ಭಾವಿಸುವವರು ಪಾವತಿಸಬೇಕಾಗಿಲ್ಲ ಎಂದು ನಾನು ಸಾರ್ವಜನಿಕವಾಗಿ ಮತ್ತು ಅಧಿಕೃತವಾಗಿ ಘೋಷಿಸಲು ಬಯಸುತ್ತೇನೆ. ಚುನಾವಣೆಗಾಗಿ ಕಾಯಿರಿ.. ಎಎಪಿ ಸರ್ಕಾರ ರಚಿಸುತ್ತದೆ, ಮತ್ತು ನಾವು ಆ ತಪ್ಪು ಬಿಲ್ಗಳನ್ನು ಮನ್ನಾ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.