ಹೊಸದಿಗಂತ, ಮಂಗಳೂರು:
ಕಾಸರಗೋಡು ಜಿಲ್ಲೆಯಲ್ಲಿ ಮಾ. 30ರ ತನಕ ವಾತಾವರಣದ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗಲಿದ್ದು, ನಾಗರಿಕರು ಚ್ಚರದಿಂದಿರಬೇಕು ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ.
ಈ ನಡುವೆ ಕೇರಳ ರಾಜ್ಯದಲ್ಲಿ ಕೂಡಾ ತಾಪಮಾನ ಅಪಾಯಕಾರಿ ಘಟ್ಟ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಮಾ.30ರ ತನಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆಲಪ್ಪುಳ, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ಮಾ.30ರ ವರೆಗೆ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್, ತ್ರಿಶೂರ್ ಜಿಲ್ಲೆಯಲ್ಲಿ 40, ಕೊಲ್ಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ 39, ಪತ್ತನಂತಿಟ್ಟ ಜಿಲ್ಲೆಯಲ್ಲಿ 38, ಕೊಟ್ಟಾಯಂ, ಎರ್ನಾಕುಲಂ, ಕಣ್ಣೂರು ಜಿಲ್ಲೆಗಳಲ್ಲಿ 37 ದಾಖಲಾಗುವ ಸಾಧ್ಯತೆಯಿದೆ.
ಇದು ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವಾಗಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯ ತನಕ ಬಿಸಿಲಿಗೆ ಮೈಯೊಡ್ಡದಂತೆ ಜಾಗ್ರತೆ ವಹಿಸಬೇಕುಎಂದು ಇಲಾಖೆ ಹೇಳಿದೆ.