ಪಿಕಪ್ ವಾಹನ- ಬೈಕ್‌ ಡಿಕ್ಕಿ: ದಂಪತಿ ಗಂಭೀರ

ಹೊಸದಿಗಂತ ವರದಿ, ಕುಶಾಲನಗರ:

ಪಿಕಪ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್’ನಲ್ಲಿದ್ದ ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ಕುಶಾಲನಗರ-ಕೂಡಿಗೆ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಯನಗರ ಗ್ರಾಮದ ನಿವಾಸಿಗಳಾದ ಪ್ರಸನ್ನ ಕುಮಾರ್ ಹಾಗೂ ಆಶಾ ಗಂಭೀರ ಗಾಯಗಳಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕೂಡಿಗೆ ಕಡೆಯಿಂದ ಬಂದ ಪಿಕಪ್ ವಾಹನ (ಕೆ. ಎ. 12 C 0402 ) ಕುಶಾಲನಗರ ಕಡೆಯಿಂದ ಕೂಡಿಗೆ ಕಡೆಗೆ ಬರುತ್ತಿದ್ದ ಬೈಕ್ (ಕೆಎ 12. ಎಲ್, 8427 ಬೈಕ್)

ಗುಮ್ಮನಕೊಲ್ಲಿ ಪೆಟ್ರೋಲ್ ಬಂಕ್ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ.
ಈ ಸಂದರ್ಭ ಬೈಕ್’ನಲ್ಲಿದ್ದ ಪ್ರಸನ್ನ ಕುಮಾರ್ ಹಾಗೂ ಆಶಾ ಗಂಭೀರ ಗಾಯಗೊಂಡಿದ್ದು, ಇವರಿಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಿ ನಂತರ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸನ್ನ ಕುಮಾರ್ ಅವರಿಗೆ ಎಡಭಾಗ ಮಂಡಿ ಹಾಗೂ ಎಡ ಕೈ ಮುರಿತವಾಗಿದ್ದು, ಆಶಾ‌\ಅವರಿಗೆ ಎಡ ಕೈ ಮುರಿತವಾಗಿ, ಕಾಲಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!