ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ಗೋಲ್ಡ್ ಪಿಂಚ್ ಸಿಟಿ ಮೈದಾನದ ವೇದಿಕೆಗೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದರು. ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂದು ಜನ ಹರ್ಷೋದ್ಗಾರ ವ್ಯಕ್ತಪಡಿಸಿದರು.
ವೇದಿಕೆ ಮುಂಭಾಗ ಕೇಸರಿ ಶಾಲು ಬೀಸುತ್ತಾ ಯುವಕ/ಯುವತಿಯರು ಕಾರ್ಯಕರ್ತರು ಪ್ರಧಾನಿಯವರಿಗೆ ಗೌರವ ಸೂಚಿಸಿದರು. ಸುಮಾರು ಎಂಟು ಯೋಜನೆಗಳಿಗೆ ಇಂದು ಪ್ರಧಾನಿ ಪ್ರಧಾನಿ ಲೋಕಾರ್ಪಣೆ ಮತ್ತೆ ಶಂಕುಸ್ಥಾಪನೆ ಮಾಡಲಿದ್ದಾರೆ.