ಪ್ರಧಾನಿ ಮೋದಿ ನನ್ನನ್ನು ಶೂರ್ಪನಖಿ ಎಂದಿದ್ರು, ನಾನು ಕೇಸ್ ಹಾಕ್ತೇನೆ: ರೇಣುಕಾ ಚೌಧರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಶೂರ್ಪನಖಿ ಎಂದಿದ್ದಾರೆ. ನಾನು ಅವರ ವಿರುದ್ಧ ಕೇಸ್ ಹಾಕ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.

ಜಾತಿ ನಿಂದನೆ ಮಾಡುವ ಮೂಲಕ ಸೂರತ್ ಕೋರ್ಟ್‌ನಿಂದ ದೋಷಿ ಎಂದು ತೀರ್ಮಾನವಾಗಿ ಜೈಲು ಶಿಕ್ಷೆ ಪಡೆದ ರಾಹುಲ್ ಗಾಂಧಿಗೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ಇದೀಗ ನಾಯಕಿ ರೇಣುಕಾ ಚೌಧರಿ ಮಾನಹಾನಿ ಬಗ್ಗೆ ಮಾತನಾಡಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ನನ್ನನ್ನು ಉದ್ದೇಶಿಸಿ ಶೂರ್ಪನಖಿ ಎಂದಿದ್ದರು. ಕೇಸ್ ಹಾಕ್ತೇನೆ ಎಷ್ಟು ಬೇಗ ಕೋರ್ಟ್ ಕೆಲಸ ಮಾಡುತ್ತದೆ ನೋಡೋಣ ಎಂದಿದ್ದಾರೆ.

ರಾಮಾಯಣ ಧಾರಾವಾಹಿ ಪ್ರಸಾರವಾಗುವಾಗ ಕೇಳುತ್ತಿದ್ದ ಈ ನಗು ಇದೀಗ ಮತ್ತೆ ಕೇಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದರು. ಆದರೆ ಎಲ್ಲಿಯೂ ಅವರನ್ನು ನೇರವಾಗಿ ಶೂರ್ಪನಖಿ ಎಂದು ಹೇಳಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!