ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 24 ಪ್ರತಿಪಕ್ಷಗಳ ಒಕ್ಕೂಟದ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕೆ ಮಾಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪೋರ್ಟ್ ಬ್ಲೇರ್ನಲ್ಲಿ ಇಂದು ಹೊಸ ಏರ್ಪೋರ್ಟ್ ಉದ್ಘಾಟನೆ ಮಾಡಿದ ಬಳಿಕ ವರ್ಚುವಲ್ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ ನಡೆಯುತ್ತಿರುವುದು ʼಕಟ್ಟರ್ ಭ್ರಷ್ಟಾಚಾರ್ ಸಮ್ಮೇಳನ್ʼಎಂದು ಕರೆದಿದ್ದಾರೆ.
‘ಇಂದು ಬೆಂಗಳೂರಿನಲ್ಲಿ ಭ್ರಷ್ಟರೆಲ್ಲ ಒಟ್ಟಾಗಿ ಸಭೆ ಸೇರಿದ್ದಾರೆ. ಕುಟುಂಬವೇ ಅವರ ಮೊದಲ ಆದ್ಯತೆ. ಕುಟುಂಬದಿಂದ..ಕುಟುಂಬಕ್ಕಾಗಿ’ ಎಂಬುದೇ ಅವರ ಧ್ಯೇಯೋದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು 26 ಪಕ್ಷಗಳು ಸೇರಿ ಸಭೆ ಮಾಡುತ್ತಿವೆ. ಕಾಂಗ್ರೆಸ್ ಸೇರಿ ಎನ್ ಡಿಎ ಹೊರತುಪಡಿಸಿದ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಒಂದಾಗಿ ಎದುರಿಸುವ ಬಗ್ಗೆ ಚರ್ಚೆ ನಡೆಸುತ್ತಿವೆ. ಇದೇ ವೇಳೆ ಮೋದಿ ಟೀಕೆ ಮಾಡಿದ್ದಾರೆ.
“ಅಲ್ಲಿ ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ ನಡೆಯುತ್ತಿದೆ” ಎಂದ ಅವರು, “ಕಳೆದ 9 ವರ್ಷಗಳಲ್ಲಿ, ನಾವು ಹಳೆಯ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸಿದ್ದೇವೆ ಮಾತ್ರವಲ್ಲದೆ ಜನರಿಗೆ ಹೊಸ ಸೌಲಭ್ಯಗಳು ಮತ್ತು ಮಾರ್ಗಗಳನ್ನು ಒದಗಿಸಿದ್ದೇವೆ. ಇಂದು ಭಾರತದಲ್ಲಿ ಹೊಸ ಅಭಿವೃದ್ಧಿಯ ಮಾದರಿಯಾಗಿದೆ. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾದರಿಯಾಗಿದೆ” ಅವರು ಹೇಳಿದರು.