ಹೊಸದಿಗಂತ ವರದಿ ಕೊಪ್ಪಳ:
ಡಕಾಯತಿ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಷ್ಟೂರ ಬಳಿ ಆರೋಪಿಗಳಿಗೆ ಗುಂಡು ಹಾರಿಸಿದ್ದಾರೆ.
ಡಕಾಯಿತಿ ಪ್ರಕರಣದಲ್ಲಿ ಐವರು ಆರೋಪಿಗಳ ಬೆನ್ನತ್ತಿದ ಚಿಕ್ಕಜಾಲ ಪೊಲೀಸರು ಶಂಕರ್ ಹಾಗೂ ಅಶೋಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಅಂಬಣ್ಣ, ಪರಶುರಾಮ, ಅಡವಿಯಪ್ಪ ಬಂಧಿತ ಆರೋಪಿಗಳು. ಗಾಯಾಳು ಆರೋಪಿಗಳನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ದಾಳಿ ವೇಳೆ ಇನ್ಸ್ಪೆಕ್ಟರ್ ಪ್ರವೀಣ್ ಎಂಬುವವರಿಗೆ ಗಾಯಗಳಾಗಿರಿವುದಾಗಿ ತಿಳಿದುಬಂದಿದೆ.