ಪೊಲೀಸ್ ನೇಮಕಾತಿ ಪರೀಕ್ಷೆ ಹಗರಣ: ಪಿಎಸ್ ಐ ಅಶ್ವಿನಿ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಲೀಸ್ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಭಾಗಿಯಾಗಿದ್ದ ಮೈಸೂರಿನ ಪಿಎಸ್ ಐ ಅಶ್ವಿನಿ ಅಮಾನತು ಮಾಡಲಾಗಿದೆ .
ಮೈಸೂರಿನ ಎನ್. ಆರ್. ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿದ್ದ ಬಾಗಲಕೋಟೆಯ ಜಮಖಂಡಿಯ ಮೂಲದ ಅಶ್ವಿನಿ ಅನಂತಪುರ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಕಮೀಷನರ್ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
PSI ಕೆಲಸ ಬೇಕು ಅಂದ್ರೆ ಮೊದಲು ಲಂಚ ಕೊಡು ಎಂದು PSI ಅಭ್ಯರ್ಥಿ ಸಂಗಮೇಶ್​ ಜೊತೆ ನಡೆಸಿದ್ಧ ಸಂಭಾಷಣೆ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಅಶ್ವಿನಿ ಅವರು ಸಂಗಮೇಶ್​ ಬಳಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಇದೇ ವೇಳೆ ಬೆಸ್ಕಾಂ, ಚೆಸ್ಕಾಂ, FDI ಹೀಗೆ ಹಲವು ಹುದ್ದೆಗಳಿಗೂ ಡೀಲ್​ ಮಾಡುವ ಕುರಿತು ಮಾತುಕತೆ ನಡೆಸಲಾಗಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!