ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಭಾರತವು ಹೊಸ ಟೀಮ್ ಸಿದ್ದವಾಗಿದ್ದು, ಹಿರಿಯ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿದೆ.
ಕಳೆದ ಹಲವು ಸರಣಿಯಿಂದ ಇಬ್ಬರು ಕಳಪೆ ಫಾರ್ಮ್ನಿಂದ ಪರದಾಡುತ್ತಿದ್ದು, ಇವರ ಜೊತೆಗೆ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ,ಇಶಾಂತ್ ಶರ್ಮಾ ಅವರನ್ನೂ ಕೂಡ ಟೆಸ್ಟ್ ತಂಡದಿಂದ ಡ್ರಾಪ್ ಮಾಡಲಾಗಿದೆ.
ಇನ್ನು ಈ ಆಟಗಾಗರಿಗೆ ಮತ್ತೊಂದು ಅವಕಾಶ ನೀಡಿದ್ದು,ರಣಜಿ ಟ್ರೋಫಿಯಲ್ಲಿ ಆಡಿ ರನ್ ಮತ್ತು ವಿಕೆಟ್ ಪಡೆದು ಫಾರ್ಮ್ಗೆ ಮರಳುವಂತೆ ಮನವಿ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ20 ಸರಣಿ ಫೆಬ್ರವರಿ 24 ರಿಂದ ನಡೆಯಲಿದೆ, ಟೆಸ್ಟ್ ಸರಣಿ ಮಾರ್ಚ್ 1ರಿಂದ ಆರಂಭವಾಗಲಿದೆ.