ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಪೂಜಾ ಹೆಗ್ಡೆ ಇದೀಗ ಬ್ರೇಕ್ ಪಡೆದು ತಮ್ಮೂರಿಗೆ ವಾಪಾಸಾಗಿದ್ದಾರೆ.
ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ದೊರಕಿದ್ದು, ಸದ್ಯ ಪೂಜಾ ಬ್ರೇಕ್ ಪಡೆದು ಮಂಗಳೂರಿಗೆ ಬಂದಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿ ಕಾಡುಗಳಲ್ಲಿ ಅಲೆದು ಹೆಬ್ಬಲಸು ಕಿತ್ತು ತಿಂದಿದ್ದಾರೆ, ಇನ್ನು ಮಲ್ಲಿಗೆ ಮುಡಿದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಮಂಗಳೂರಿನ ಕಾಡುಗಳಲ್ಲಿ ಪೂಜಾ ಓಡಾಟ ನಡೆಸಿದ್ದು, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.