ಡಾ. ಕೆ ಸುಧಾಕರ್ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಾ ಕೆ. ಸುಧಾಕರ್ ಒಬ್ಬ ಅಯೋಗ್ಯ, ಬರೀ ಡಬಲ್ ಗೇಮ್ ಆಡ್ತಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲಿ ನಿಂದಿಸಿದ್ದಾರೆ.

ಸುಧಾಕರ್ ಡಬಲ್ ಗೇಮ್, ಯಾಕೆ ಅಂತ ಕೇಳಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಟಿಕೆಟ್ ಸಿಕ್ರೆ ಸ್ಪರ್ಧೆ ಮಾಡ್ತಾರಂತೆ, ಅಕಸ್ಮಾತ್ ಸಿಗ್ಲಿಲ್ಲ ಅಂದ್ರೆ ಕಾಂಗ್ರೆಸ್‌ನಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸ್ತಾರಂತೆ ಎಂದು ಹೇಳಿದ್ದಾರೆ.

ಇದ್ರೆ ನಿಯತ್ತಾಗಿ ಒಂದು ಪಕ್ಷದಲ್ಲಿ ಇರ್ಬೇಕು, ಈಗಾಗ್ಲೇ ಒಂದ್ ಸಲ ಕಾಂಗ್ರೆಸ್‌ಗೆ ಮೋಸ ಮಾಡಿ ಹೋಗಿದಿರಿ. ಮತ್ತೆ ಬಂದ್ರಿ ಅಂದ್ರೆ ಕೆಪಿಸಿಸಿ ಕಚೇರಿ ಹೊರಗೆ ಇರೋ ವಸ್ತುಗೆ ಸಮ ಆಗ್ತೀರಿ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!