ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತು ಶೀಘ್ರದಲ್ಲೇ ಜಾರಿಗೆ ಬರಲಿದೆ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ವೇಳೆಗೆ 12 ನೇ ಕಂತು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಯೋಜನೆಯ ಭಾಗವಾಗಿ ರೈತ ಫಲಾನುಭವಿಗಳು ವಾರ್ಷಿಕವಾಗಿ ರೂ 6000 ಪಡೆಯುವ ಹಣವನ್ನು ಪಡೆಯಲಿದ್ದಾರೆ. ಆದರೆ ಅರ್ಹರಲ್ಲದ ವ್ಯಕ್ತಿಗಳು ಕಾನೂನುಬಾಹಿರವಾಗಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುವುದನ್ನು ತಪ್ಪಿಸಲು ಇಕೆವೈಸಿಯನ್ನು ಜಾರಿಗೆ ತಂದಿದೆ. ಇದರ ಪ್ರಕಾರ ರೈತಫಲಾನುಭವಿಗಳು ಈ ನಿಧಿಯನ್ನು ಪಡೆಯಲು ಇ-ಕೆವೈಸಿಯನ್ನು ಮಾಡಿಕೊಳ್ಳಬೇಕಿದೆ.
PPM ಕಿಸಾನ್ನ ವೆಬ್ಸೈಟ್ನ ಪ್ರಕಾರ ಎಲ್ಲಾ PMKISAN ಫಲಾನುಭವಿಗಳಿಗೆ eKYC ಯ ಗಡುವನ್ನು 31 ಆಗಸ್ಟ್ 2022 ರವರೆಗೆ ವಿಸ್ತರಿಸಲಾಗಿದೆ.
eKYC ಅನ್ನು ಹೇಗೆ ಮಾಡೋದು ?
-ಮೊದಲು, https://pmkisan.gov.in/ ನಲ್ಲಿ PM ಕಿಸಾನ್ನ ಅಧಿಕೃತ ವೆಬ್ಪುಟಕ್ಕೆ ಭೇಟಿ ನೀಡಿ.
-ಮುಖಪುಟದ ಬಲಭಾಗದಲ್ಲಿ ಲಭ್ಯವಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-ನೀವು eKYC ಪುಟಕ್ಕೆ ತೆರಳಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.
– ನಂತರ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
-ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ‘OTP ಪಡೆಯಿರಿ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ಹಿಂದೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ನೀವು ಒಟಿಪಿಯನ್ನು ಸ್ವೀಕರಿಸುತ್ತೀರಿ. ಈಗ, ಈ OTP ಅನ್ನು ನಿರ್ದಿಷ್ಟಪಡಿಸಿದ ಬಾಕ್ಸ್ನಲ್ಲಿ ನಮೂದಿಸಿ
ಇದರ ನಂತರ ನಿಮ್ಮ eKYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಜುಲೈ 31 ರೊಳಗೆ ನೀವು eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ. PM ಕಿಸಾನ್ನ ಮುಂದಿನ ಕಂತನ್ನು ಸ್ವೀಕರಿಸಲು ನೀವು ಅರ್ಹರಾಗಿರುವುದಿಲ್ಲ.
ಇದನ್ನು ನೀವು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (CSC) ನಲ್ಲಿಯೂ ಮಾಡಬಹುದಾಗಿದೆ.