ದಿನಭವಿಷ್ಯ: ರಾಜಯೋಗದಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ

ಮೇಷ
ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿ. ಇಷ್ಟಪಡುವ ಕಾರ್ಯ ಮಾಡಲು ಹಿಂಜರಿಕೆ ಬೇಡ. ಆರ್ಥಿಕ ಬಿಕ್ಕಟ್ಟು ಪರಿಹಾರ.

ವೃಷಭ
ಏರುಪೇರಿನ ದಿನ. ಸಂವಹನದ ಕೊರತೆಯಿಂದ ಕೆಲವರ ಜತೆ ಅಸಮಾಧಾನ ಉಂಟಾದೀತು. ಸೋಂಕು ರೋಗದ ಕುರಿತು ಎಚ್ಚರ ವಹಿಸಿರಿ.

ಮಿಥುನ
ಕೆಲಸಕಾರ್ಯದಲ್ಲಿ ಉದಾಸೀನತೆ.  ಯಾವುದೇ ಕೆಲಸ ಫಲ ಕೊಡುತ್ತಿಲ್ಲ ಎಂಬ ನಿರಾಶೆ ಇದಕ್ಕೆ ಕಾರಣ. ಒಂದೆರಡು ದಿನದಲ್ಲಿ  ಎಲ್ಲ ಸರಿಯಾಗಲಿದೆ.

ಕಟಕ
ಕಾರ್ಯದಲ್ಲಿ ಉತ್ಸಾಹ ಹೆಚ್ಚಿಸಿಕೊಳ್ಳಿ. ಸಮಸ್ಯೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರದಿರಲಿ. ಕೌಟುಂಬಿಕ ಪರಿಸರದಲ್ಲಿ ಉತ್ಸಾಹ ಕಂಡುಕೊಳ್ಳಿ.

ಸಿಂಹ
ಮನೆ, ಕಚೇರಿಯಲ್ಲಿ ಕೋಲಾಹಲ,  ಸ್ಥೈರ್ಯಗೆಡಿಸುವ  ಬೆಳವಣಿಗೆ. ಆದರೆ ಅದನ್ನು  ನಿಭಾಯಿಸುವ ಕಲೆಯೂ ನಿಮಗೆ ಗೊತ್ತು.

ಕನ್ಯಾ
ವೈಯಕ್ತಿಕ ಸಮಸ್ಯೆ, ಅಭದ್ರತೆಯ ಕಾರಣದಿಂದಾಗಿ ವಿವೇಕ ನಶಿಸಬಹುದು. ನಿರ್ಧಾರ ತಪ್ಪಬಹುದು. ಸಮಾಧಾನದಿಂದ ಆಲೋಚಿಸಿರಿ.

ತುಲಾ
ಕೆಲವು ವಿಷಯದಲ್ಲಿ ನಿರ್ಧಾರಕ್ಕೆ ಬರುವ ಮುನ್ನ ಅದರ ಎಲ್ಲಾ ಮುಖ ಪರಿಶೀಲಿಸಿ. ಕಂಡದ್ದೆಲ್ಲ ನಂಬುವುದು ಸರಿಯಲ್ಲ. ಆರೋಗ್ಯಕರ ಆಹಾರ ಸೇವಿಸಿ.

ವೃಶ್ಚಿಕ
ಮನಸ್ಸನ್ನು ಅಸ್ಥಿರ ಗೊಳಿಸುವ ಬೆಳವಣಿಗೆ. ಹಾಗಾಗಿ ನೆಮ್ಮದಿ ದೂರ. ಮನಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಸ್ಥೈರ್ಯ ಕಳಕೊಳ್ಳದಿರಿ.

ಧನು
ಕೆಲಸದಲ್ಲಿ ಏಕಾಗ್ರಚಿತ್ತ ಕಷ್ಟ. ಆತ್ಮೀಯರ ಕುರಿತಂತೆ ಮನಸ್ಸು ಹರಿದಾಡುತ್ತದೆ. ಕೌಟುಂಬಿಕ ಸಮ್ಮಿಲನವು ನಿಮ್ಮ ಸಂತೋಷ ಹೆಚ್ಚಿಸಲಿದೆ.

ಮಕರ
ಮನೆ, ಕಚೇರಿ ಸೇರಿದಂತೆ ಎಲ್ಲೆಡೆಗಳಲ್ಲಿ ಹಿನ್ನಡೆ ಅನುಭವಿಸುವಿರಿ. ಆದಾಯವನ್ನು ಹೆಚ್ಚಿಸುವ ನಿಮ್ಮ ಯೋಜನೆ ಪೂರ್ಣ ಫಲ ನೀಡಲಾರದು.

ಕುಂಭ
ಇತರರ ಆದೇಶ ಪಾಲಿಸುತ್ತಾ ಅವರಿಗೆ ಅಡಿಯಾಳಿನಂತೆ ವರ್ತಿಸದಿರಿ. ನಿಮ್ಮ ಸ್ವಂತಿಕೆ ಬಿಟ್ಟುಕೊಡದಿರಿ.   ತಿರುಗಿ ಬೀಳಲು ಕಲಿಯಿರಿ.

ಮೀನ
ಆರ್ಥಿಕ ಒತ್ತಡ. ಕಂಡದ್ದೆಲ್ಲ ಖರೀದಿಸುವ ಧಾವಂತ ಬೇಡ. ನಯವಂಚಕರ ಕುರಿತು ಎಚ್ಚರದಿಂದಿರಿ. ಕೇಳಿದ್ದೆಲ್ಲಾ ನಂಬಬೇಡಿ. ವಿವೇಚನೆ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!